ಮಡಿಕೇರಿ, ಸೆ.18: ಕೊಡಗು ಜಿಲ್ಲೆಯ ಅಂಚೆ ಕಚೇರಿಗಳಲ್ಲಿ ‘’ಸುಕನ್ಯ ಸಮೃದ್ಧಿ ಖಾತೆ’’ ತೆರೆದಿರುವವರ ತಂದೆ ಅಥವಾ ತಾಯಂದಿರು ಆಯಾಯ ಅಂಚೆ ಕಚೇರಿಗಳಿಗೆ ತೆರಳಿ ತಮ್ಮ ಖಾತೆಗೆ ಮೊಬೈಲ್ ನಂಬರನ್ನು ಜೋಡಣೆ ಮಾಡಲು ಈ ತಿಂಗಳ ಒಳಗಾಗಿ ಭೇಟಿ ನೀಡಬೇಕೆಂದು ಕೊಡಗು ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.