ಮಡಿಕೇರಿ, ಸೆ.18: ಬೆಂಗಳೂರು ವಲಯ ಸೇನಾ ನೇಮಕಾತಿ ಕಚೇರಿ ವತಿಯಿಂದ ಅಕ್ಟೋಬರ್ 13 ರಿಂದ 18 ರವರೆಗೆ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೈನಿಕರ ನೇಮಕಾತಿ ರ್ಯಾಲಿ ನಡೆಯಲಿದೆ. ತಾ. 29 ರವರೆಗೆ ಆನ್‍ಲೈನ್‍ನಲ್ಲಿ ದಾಖಲಿಸಿಕೊಳ್ಳುವದು ಕಡ್ಡಾಯವಾಗಿದೆ. ರ್ಯಾಲಿಯಲ್ಲಿ ಭಾಗವಹಿಸಲು ಪ್ರವೇಶ ಪತ್ರಗಳನ್ನು ಅಕ್ಟೋಬರ್ 1 ರೊಳಗೆ ರಿಜಿಸ್ಟರ್ಡ್ ಇ-ಮೈಲ್ ಮೂಲಕ ಕಳುಹಿಸಲಾಗುವದು. ಅಭ್ಯರ್ಥಿಗಳು ರ್ಯಾಲಿಯ ಸ್ಥಳಕ್ಕೆ ಪ್ರವೇಶ ಪತ್ರದಲ್ಲಿ ನಮೂದಿಸಿರುವ ದಿನಾಂಕ ಮತ್ತು ವೇಳೆಯೊಳಗೆ ಇರತಕ್ಕದ್ದು. ಹೆಚ್ಚಿನ ಮಾಹಿತಿಗೆ ತಿತಿತಿ.ರಿoiಟಿiಟಿಜiಚಿಟಿಚಿಡಿmಥಿ.ಟಿiಛಿ.iಟಿ ಅಥವಾ ದೂರವಾಣಿ ಸಂಖ್ಯೆ 080-25596517 ನ್ನು ಸಂಪರ್ಕಿಸಬಹುದು.