ಮಡಿಕೇರಿ, ಸೆ. 19: ಹಟ್ಟಿಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಅಪೆಕ್ಸ್ ಬ್ಯಾಂಕಿನ ನೌಕರರ ಸಾಂಸ್ಕೃತಿಕ ಸಂಘದ ವತಿಯಿಂದ ನೀಡಲಾದ ದೇಣಿಗೆ ಹಣವನ್ನು ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಅವರು ಮಕ್ಕಳಿಗೆ ವಿತರಿಸಿದರು.

ಇದರೊಂದಿಗೆ ಕಾಂಡನಕೊಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಅಪೆಕ್ಸ್ ಬ್ಯಾಂಕ್‍ನ ನೌಕರರ ಸಾಂಸ್ಕೃತಿಕ ಸಂಘದ ವತಿಯಿಂದ ನೀಡಲಾಗಿದ್ದು, ಇದನ್ನು ಹಸ್ತಾಂತರಿಸಲಾಯಿತು.