ಗುಡ್ಡೆಹೊಸೂರು, ಸೆ. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕುಶಾಲನಗರ ವಲಯ ಮಟ್ಟದ ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ಇಲ್ಲಿನ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗುಡ್ಡೆಹೊಸೂರು ಪಿ.ಡಿ.ಓ. ಶ್ಯಾಂ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭ ಮಾತನಾಡಿ, ಗ್ರಾಮಗಳ ಸ್ವಚ್ಛತೆಯ ಬಗ್ಗೆ ಒಕ್ಕೂಟದ ಸದಸ್ಯರು ಗಮನ ಹರಿಸುವಂತೆ ಮತ್ತು ಸ್ವಚ್ಛ ಗ್ರಾಮದ ಬಗ್ಗೆ ಸಲಹೆ ಸೂಚನೆ ಮಾಡಿದರು. ವೇದಿಕೆಯಲ್ಲಿ ಒಕ್ಕೂಟದ ಜಿಲ್ಲಾ ನಿರ್ದೇಶಕ ಯೊಗೇಶ್, ತಾಲೂಕು ಯೋಜನೆ ಅಧಿಕಾರಿ ಪ್ರಕಾಶ್. ವೈ ಮತ್ತು ವಲಯ ಮೇಲ್ವಿಚಾರಕ ಹರೀಶ್ ಕೆ. ಒಕ್ಕೂಟದ ಉಪಾಧ್ಯಕ್ಷ ಶಶಿಕಲಾ ಹಾಜರಿದ್ದರು. ಈ ಸಂದರ್ಭ ಯೋಜನಾಧಿಕಾರಿಗಳು ಸದಸ್ಯರಿಗೆ ತರಬೇತಿ ನೀಡಿದರು. ಸದಸ್ಯೆ ವಾರಿಜಾ ಸ್ವಾಗತಿಸಿ, ಮೇಲ್ವಿಚಾರಕಿ ರೋಹಿಣಿ ಅವರು ವಂದಿಸಿದರು.