*ಗೋಣಿಕೊಪ್ಪಲು, ಸೆ. 19: 41ನೇ ವರ್ಷದ ಕಾವೇರಿ ದಸರಾ ಸಮಿತಿ ಆಚರಿಸುವ ಗೋಣಿಕೊಪ್ಪಲು ದಸರಾ ಜನೋತ್ಸವ ಅಂಗವಾಗಿ ನಡೆಯುವ ದಸರಾ ಬಹುಭಾಷಾ ಕವಿಗೋಷ್ಠಿಗೆ ಕವಿ, ಕವಿಯತ್ರಿಯರಿಂದ ಕವನಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು ತಮ್ಮ ಸ್ವರಚಿತ ಕವಿತೆಗಳನ್ನು ಕಳುಹಿಸಿಕೊಡಬಹುದೆಂದು ಕವಿಗೋಷ್ಠಿ ಅಧ್ಯಕ್ಷ ಮಧೋಶ್ ಪೂವಯ್ಯ ತಿಳಿಸಿದ್ದಾರೆ. ರಾಷ್ಟ್ರ, ನಾಡು, ಸಂಸ್ಕೃತಿ, ಕಲೆ, ಆಚಾರ, ಪ್ರಕೃತಿ ವಿಚಾರಗಳನ್ನು ಒಳಗೊಂಡ ಸ್ವರಚಿತ ಕವನಗಳನ್ನು ಕಳುಹಿಸಿಕೊಡಬಹುದಾಗಿದ್ದು, ಕನ್ನಡ, ಕೊಡವ, ಅರೆಭಾಷೆ ಸೇರಿದಂತೆ ಇತರ ಭಾಷೆಗಳಲ್ಲಿಯೂ ಕವಿತೆಗಳನ್ನು ಕಳುಹಿಸುವ ಅವಕಾಶವಿದೆ. ಕವನಗಳು 20 ಸಾಲುಗಳು ಮೀರದಂತೆ ಇದೇ ತಿಂಗಳ 28ರೊಳಗೆ

ಶ್ರೀ ಕಾವೇರಿ ದಸರಾ ಸಮಿತಿ ಗೋಣಿಕೊಪ,್ಪ ಅಧ್ಯಕ್ಷರು, ಕವಿಗೋಷ್ಠಿ ಸಮಿತಿ, ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ಈ ವಿಳಾಸಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ : 9480556667, 9483873845 ಸಂಪರ್ಕಿಸಬಹುದಾಗಿದೆ.