ಚೆಟ್ಟಳ್ಳಿ, ಸೆ. 19: ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್.ಎಸ್.ಎಫ್.) ಮುಖವಾಣಿ “ಇಶಾರ ಪಾಕ್ಷಿಕ” ಇದರ ಜಿಲ್ಲಾಮಟ್ಟದ ಚಂದಾ ಅಭಿಯಾನಕ್ಕೆ ಸುನ್ನಿ ಯುವಜನ ಸಂಘ (ಎಸ್.ವೈ.ಎಸ್.) ಜಿಲ್ಲಾಧ್ಯಕ್ಷ ಹಫೀಲ್ ಸಹದಿ ಚಾಲನೆ ನೀಡಿದರು. ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಅಜೀಜ್ ಸಖಾಫಿ ಕೊಡಗು ಜಿಲ್ಲಾದ್ಯಾಂತ ಕೂಪನ್ ಪುಸ್ತಕ ವಿತರಣೆಗೆ ನೇತೃತ್ವ ವಹಿಸಿದ್ದರು. ತಾ. 30 ರವರೆಗೆ ಚಂದಾ ಅಭಿಯಾನ ಕೊಡಗು ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ಸಖಾಫಿ ತಿಳಿಸಿದ್ದಾರೆ.

ಸೋಮವಾರಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಎಸ್.ಎಫ್. ಜಿಲ್ಲಾ ಉಪಾಧ್ಯಕ್ಷ ಶಾಫಿ ಸಹದಿ, ಕಾರ್ಯದರ್ಶಿ ರಹೀಮ್, ಉನೈಸ್ ಹೊಸತೋಟ, ಖಮರುದ್ದೀನ್ ಸಖಾಫಿ ಇದ್ದರು.