ಗೋಣಿಕೊಪ್ಪ, ಸೆ. 19: ಗೋಣಿಕೊಪ್ಪದ ಕಾವೇರಿ ದಸರಾ ಸಮಿತಿಯ ಮಹಿಳಾ ಅಧ್ಯಕ್ಷರಾಗಿ ನೂರೆರ ರತಿ ಅಚ್ಚಪ್ಪನವರು ಆಯ್ಕೆಯಾಗಿದ್ದಾರೆ.

ಇಂದು ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ರಾಮಕೃಷ್ಣ, ಕಾರ್ಯಾಧ್ಯಕ್ಷ ಕುಲ್ಲಚಂಡ ಬೋಪಣ್ಣ, ಪ್ರಧಾನ ಕಾರ್ಯದರ್ಶಿ ಜಿಮ್ಮಿ ಸುಬ್ಬಯ್ಯ, ಮಹಾಪೋಷಕ ಗಿರೀಶ್ ಗಣಪತಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಿಳಾ ಅಧ್ಯಕ್ಷರಾಗಿ ನೂರೆರ ರತಿ ಅಚ್ಚಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ತಾ. 20 ರಂದು (ಇಂದು) ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಅಧ್ಯಕ್ಷ ರಾಮಕೃಷ್ಣ ತಿಳಿಸಿದ್ದಾರೆ. -ಚಾನಲ್ ಕೂರ್ಗ್