ಕುಶಾಲನಗರ, ಸೆ. 19: ಕುಶಾಲನಗರ ಸಮೀಪ ಗುಡ್ಡೆಹೊಸೂರು ಐಶ್ವರ್ಯ ಕಾಲೇಜು ಆವರಣದಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬುಧವಾರ ಸಂಜೆ ನಡೆದ ಗೊಂದಲದ ನಡುವೆ ಪ್ರಕರಣವೊಂದು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

ಎರಡು ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ಫೈನಲ್‍ಗೆ ಬಂದ ಬಾಲಕರ ತಂಡದ ನಡುವೆ ಗೊಂದಲ ಉಂಟಾಗಿ ಆಯೋಜಕರ ದೂರಿನ ಮೇರೆಗೆ ಪೊಲೀಸರು ಮಧ್ಯ ಪ್ರವೇಶಿಸಿದ ಘಟನೆ ನಡೆಯಿತು. ಅಂದಾಜು 20 ಬಾಲಕರ ತಂಡ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದು ಅಂತಿಮವಾಗಿ ಕುಶಾಲನಗರ ವಿವೇಕಾನಂದ ಮತ್ತು ಆತಿಥೇಯ ತಂಡ ಫೈನಲ್‍ಗೆ ತಲಪಿದ್ದು ಬೆಂಬಲಿಗರ ಗುಂಪು ನಿಯಂತ್ರಣ ಹಿನ್ನೆಲೆಯಲ್ಲಿ ಪ.ಪೂ. ಕಾಲೇಜಿನ ಜಿಲ್ಲಾ ಉಪನಿರ್ದೇಶಕರ ಗಮನಕ್ಕೂ ತರಲಾಯಿತು. ವಿಷಯ ತಿಳಿದ ಉಪನಿರ್ದೇಶಕ ಕೆಂಚಪ್ಪ ಕಾಲೇಜಿಗೆ ಭೇಟಿ ನೀಡಿ ಸಮಾಧಾನಿಸುವಲ್ಲಿ ಯಶಸ್ವಿಯಾದರು.

ಈ ನಡುವೆ ಕೆ.ಎಸ್. ಮೂರ್ತಿ ಎಂಬವರು ಕೆಂಚಪ್ಪ ಅವರನ್ನು ಮೊಬೈಲ್ ಸಂಪರ್ಕ ಮೂಲಕ ಬೆದರಿಸಿರುವದಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.