ಮಡಿಕೇರಿ, ಸೆ. 19: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ನಗರದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗಾಂಧೀಜಿ ವಿಚಾರಧಾರೆ ಕುರಿತು ವಿವಿಧ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸುವ ಕುರಿತು ನಗರದ ಪತ್ರಿಕಾ ಭವನದಲ್ಲಿ ಇತ್ತೀಚೆಗೆ ಸಭೆ ನಡೆಯಿತು.

ಸಭೆಯಲ್ಲಿ ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್, ನಗರಸಭೆ ಪೌರಾಯುಕ್ತ ಎಂ.ಎಲ್. ರಮೇಶ್, ಸಮಿತಿ ಸದಸ್ಯರಾದ ಮುನೀರ್ ಅಹಮದ್, ಕೋಡಿ ಚಂದ್ರಶೇಖರ್, ಕೆ.ಟಿ. ಬೇಬಿಮ್ಯಾಥ್ಯೂ, ಸುರಯ್ಯಾಅಬ್ರಾರ್, ರೇವತಿ ರಮೇಶ್, ಲಿಯಾಕತ್‍ಆಲಿ, ಚಂದ್ರು, ಯಶೋಧ, ವಿಲ್‍ಫ್ರೆಡ್ ಕ್ರಾಸ್ತಾ, ಪ್ರೇಮ ಕೃಷ್ಣಪ್ಪ, ಸ್ವರ್ಣಲತಾ ಇತರರು ಇದ್ದರು.