ಸೋಮವಾರಪೇಟೆ,ಸೆ.20: ರಾಷ್ಟ್ರೀಯ ಏಕತಾ ಅಭಿಯಾನ ಸಮಿತಿ ವತಿಯಿಂದ ತಾ.21ರಂದು (ಇಂದು) ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಒಂದು ದೇಶ, ಒಂದು ಸಂವಿಧಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ವಿಧಾನಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್, ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅಭಿಯಾನ ಸಮಿತಿಯ ಮನುಕುಮಾರ್ ರೈ ತಿಳಿಸಿದ್ದಾರೆ.