ಮಡಿಕೇರಿ, ಸೆ. 20: ಶ್ರೀ ಕಾವೇರಿ ಆಶ್ರಮ, ವೀರಾಜಪೇಟೆ ವತಿಯಿಂದ ನವರಾತ್ರಿ ಉತ್ಸವ ಮತ್ತು ಶ್ರೀ ಕಾವೇರಿ ತೀರ್ಥಪೂಜೆ ಕಾರ್ಯಕ್ರಮ ನಡೆಯಲಿದೆ.

ನವರಾತ್ರಿ ಉತ್ಸವವನ್ನು ತಾ. 29ರಿಂದ ಅ. 7ರ ತನಕ ಆಚರಿಸಲಾಗುವದು.

ಅ.1ರಂದು ಶ್ರೀ ಚಂಡಿ ಹೋಮ ಜರುಗಲಿದೆ. ತಾ. 21ರಂದು ಶ್ರೀ ಕಾವೇರಿ ತೀರ್ಥ ಪೂಜೆ ಹಾಗೂ ಸಭಾ ಕಾರ್ಯಕ್ರಮ ಪೂರ್ವಾಹ್ನ 10 ಗಂಟೆಗೆ ವಿವೇಕಾನಂದ ಶರಣ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಜರುಗಲಿದೆ. ಈ ಸಂದರ್ಭ ‘ಹರಿಕಥೆ’, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.