ಸುಂಟಿಕೊಪ್ಪ, ಸೆ. 20: ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಪನ್ಯ ಅಂಗನವಾಡಿ ಉಪಕೇಂದ್ರ ಮತ್ತು ಹರದೂರು ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದಡಿ ಗರ್ಭಿಣಿ ಬಾಣಂತಿಯರಿಗೆ ಪೌಷ್ಠಿಕ ಆಹಾರ ಸೇವನೆ. ಸಾಂಕ್ರಾಮಿಕ ರೋಗ ಜಂತು ಹುಳು ನಿವಾರಣಾ ಕ್ರಮ ಮತ್ತು ಸ್ತನ್ಯಪಾನ ಮಹತ್ವದ ಬಗ್ಗೆ ಹಿರಿಯ ಮಹಿಳಾ ಬಿ.ಎಂ. ಯೋಗಿನಿ ಮಾಹಿತಿ ನೀಡಿದರು.

ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ, ಕೆ.ಎಸ್. ಜಯಂತಿ, ಸರಸ್ವತಿ, ಸಹಾಯಮೇರಿ, ಆಶಾಕಾರ್ಯಕರ್ತೆ ಜ್ಯೋತಿ ಭಾಸ್ಕರ್, ರೂಪ ಹಾಗೂ ಸಾರ್ವಜನಿಕರು ಹಾಜರಿದ್ದರು.