ಪೆರಾಜೆ, ಸೆ.20: ಇಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಭೆ ಪೆರಾಜೆ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂದಿರದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ವಹಿಸಿದ್ದರು. ಉಪಾಧ್ಯಕ್ಷ ಕುಂದಲ್ಪಾಡಿ ಉಪೇಂದ್ರ, ನಿರ್ದೇಶಕರುಗಳಾದ ಕೇಶವ ಕೊಳಂಗಾಯ, ವಿಷ್ಣುಪ್ರಸಾದ, ರಾಜೇಶ್ ವಿ., ಬಾಬುಸೆಬಾಸ್ಟಿನ್, ಪಿ. ಹೆಚ್. ಚಂದ್ರಶೇಖರ, ರಾಮಕೃಷ್ಣ ಪಿ.ಎಮ್, ಚಂದ್ರಾವತಿ, ಡಿ.ಡಿ.ಸುಷ್ಮಾ, ಕಾರ್ಯದರ್ಶಿ ಇಂದಿರಾ ಕೆ.ಎಸ್., ಹಾಲು ಪರೀಕ್ಷಕಿ ವಿಜಯ ಹಾಗೂ ಕೃ.ಗ.ಧ.ರಾದ ಕೃಪಸೂರ್ಯ ಕೊಳಂಗಾಯ ಉಪಸ್ಥಿತರಿದ್ದರು.