ಒಡೆಯನಪುರ, ಸೆ. 20: ಇಲ್ಲಿಗೆ ಸಮೀಪದ ಶನಿವಾರಸಂತೆ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ನೂತನ ಕಾರ್ಯಾಕಾರಿ ಸಮಿತಿ ರಚನೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್.ಲೋಕೇಶ್‍ಸಾಗರ್ ಅಧ್ಯಕ್ಷತೆಯಲ್ಲಿ ರಚಿಸಲಾಯಿತು. ಕಸಾಪ ಘಟಕದ ನೂತನ ಸಮಿತಿ ಅಧ್ಯಕ್ಷರಾಗಿ ಬಿ.ಬಿ.ನಾಗರಾಜ್ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿ ಕಾರ್ಯದರ್ಶಿಗಳಾಗಿ ದಿನೇಶ್ ಮಾಲಂಬಿ, ಭುವನೇಶ್ವರಿ ಹರೀಶ್ ಅವರುಗಳನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಕೋಶಾಧಿಕಾರಿಯಾಗಿ ಡಿ.ಬಿ.ಸೋಮಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಕಸಾಪ ಘಟಕದ ನೂತನ ಸಮಿತಿ ನಿರ್ದೇಶಕರುಗಳಾಗಿ ಸರ್ಫ್‍ರಾಜ್ ಆಹಮದ್, ನಳಿನಿ, ಶೋಭಾವತಿ, ಪ್ರಕಾಶ್‍ಚಂದ್ರ, ವಿ.ಸಿ.ಸುರೇಶ್ ಒಡೆಯನಪುರ, ಚಂದ್ರಶೇಖರ್, ಕಾಂತರಾಜ್, ಸುನಂದ, ಹೇಮಾಲಿಂಗರಾಜ್, ಪ್ರೇಮ್‍ಕುಮಾರ್, ಪುಷ್ಪಾ ನಾಗರಾಜ್, ಕೆ.ಎಸ್.ರಾಮಕುಮಾರ್ ಇವರುಗಳನ್ನು ಮಾಡಲಾಯಿತು. ಕಸಾಪ ಘಟಕದ ಸಲಹೆಗಾರರಾಗಿ ಕೆ.ಪಿ.ಜಯಕುಮಾರ್, ಎಸ್.ಬಿ.ನಂಜಪ್ಪ ಮತ್ತು ಎಸ್.ಆರ್.ಶಿವಪ್ಪ ಇವರುಗಳನ್ನು ಆಯ್ಕೆಮಾಡಲಾಯಿತು.