ಮಡಿಕೇರಿ, ಸೆ. 20: ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ವತಿಯಿಂದ ಸಂಘಟಿಸುವ ಕಾರ್ಯಕ್ರಮದಲ್ಲಿ ಮಡಿಕೇರಿಯ ಅರುಣ ಸ್ಟೋರ್ ಮಾಲೀಕರು ಸಂತ್ರಸ್ತರಿಗೆ ಪುಸ್ತಕ ಮತ್ತು ಶಾಲಾ ಪರಿಕರಗಳನ್ನು ನೀಡಿದ್ದಾರೆ. ನಗರದ ಪಾಂಡ್ಯನ್ ಎಂಟರ್‍ಪ್ರೈಸಸ್ ಮಾಲೀಕ ಅಣ್ಣದೊರೈ ಅವರು ನೀಡಿದ ಬೆಡ್‍ಶೀಟ್, ರೇಡಿಯೋ, ಬಟ್ಟೆಗಳು ಹಾಗೂ ಇನ್ನು ಹಲವು ಸಾಮಗ್ರಿಗಳನ್ನು ನೀಡಲಾಗಿದೆ. ನಗರದ ಬ್ಯಾಗ್ ಪ್ಯಾಲೇಸ್ ಮಾಲೀಕ ಪೀಟರ್ ಬ್ಯಾಗ್‍ಗಳನ್ನು ನೀಡಿದ್ದಾರೆ. ಈ ಸಾಮಗ್ರಿಗಳನ್ನು ನೆಲ್ಲಿಹುದಿಕೇರಿಯ ಪುನರ್ವಸತಿ ಕೇಂದ್ರಕ್ಕೆ ತೆರಳಿ ಅಲ್ಲಿನ ಸಂತ್ರಸ್ತರಿಗೆ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ರವಿ ಗೌಡ, ಸಂಘಟನಾ ಕಾರ್ಯದರ್ಶಿ ಪ್ರದೀಪ್, ಅಜಿತ್, ಉಮೇಶ್ ಗೌಡ, ಪ್ರದೀಪ್ ಮರಗೋಡು, ರಮೇಶ್, ಗೋಪಾಲ್ ಇವರುಗಳು ಹಾಜರಿದ್ದರು.