ಮಡಿಕೇರಿ, ಸೆ. 20: ಮಂಗಳೂರಿನ ಯೆನೆಪೋಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಿದ್ದಾಪುರ ಹುಮ್ಯಾನಿ ಟೇರಿಯಸ್ ರಿಲೀಫ್ ಸೊಸೈಟಿ, ಎಸ್‍ಐಓ ಆಫ್ ಇಂಡಿಯಾ, ಜಮಾಅತೆ ಇಸ್ಲಾಮಿಹಿಂದ್, ಸಿದ್ದಾಪುರ ಇಕ್ರಾ ಪಬ್ಲಿಕ್ ಸ್ಕೂಲ್, ಪ್ರಬುದ್ಧ ನೌಕರರ ಒಕ್ಕೂಟ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೊಡಗು ನೆರೆ ಸಂತ್ರಸ್ತರು ಹಾಗೂ ನಾಗರಿಕರಿಗಾಗಿ ಉಚಿತ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ತಾ. 22 ರಂದು ಸಿದ್ದಾಪುರ ಇಕ್ರಾ ಪಬ್ಲಿಕ್ ಸ್ಕೂಲ್‍ನಲ್ಲಿ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊ. 9482668862, 9449364571 ಅನ್ನು ಸಂಪರ್ಕಿಸಬಹುದಾಗಿದೆ.