ಮಡಿಕೇರಿ, ಸೆ. 20: ಮೂರ್ನಾಡು ಕೊಡವ ಸಮಾಜದ ನೂತನ ಅಧ್ಯಕ್ಷರಾಗಿ ನೆರವಂಡ ಅನೂಪ್ ಉತ್ತಯ್ಯ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಂಬೀರಂಡ ಗೌತಮ್, ಕಾರ್ಯದರ್ಶಿಯಾಗಿ ನೆರವಂಡ ಕವಿತಾ ಬೆಳ್ಳಿಯಪ್ಪ, ಖಜಾಂಚಿಯಾಗಿ ಮೂಡೆರ ಪವಿತಾ ಚೋಂದಮ್ಮ ಅವರುಗಳು ನೇಮಕಗೊಂಡಿದ್ದಾರೆ. ನಿರ್ದೇಶಕರುಗಳಾಗಿ ಇತರ 21 ಮಂದಿ ಆಯ್ಕೆಯಾಗಿದ್ದು, ಇತ್ತೀಚೆಗೆ ಅವಿರೋಧವಾಗಿ ಈ ಆಯ್ಕೆ ನಡೆದಿದೆ.