ಸುಂಟಿಕೊಪ್ಪ, ಸೆ. 20: ಹಾಲೇರಿ ಕಾಂಡನಕೊಲ್ಲಿಯ ಪಾಪ್ಲಿಕಾಡು ಎಸ್ಟೇಟ್ ಬಳಿ ಕಳೆದ ವರ್ಷದ ಮಳೆಗೆ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡಿದ್ದ ಪ್ರದೇಶದಲ್ಲಿ ಟಾಟಾ ಎಸ್ಟೇಟ್ ಕಂಪೆನಿಯಿಂದ ವೆಟಿವೆರ್ ಹುಲ್ಲು ನಾಟಿ ಮಾಡುವ ಮೂಲಕ ಶ್ರಮದಾನವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಟಾಟಾ ಕಾಫಿ ಎಸ್ಟೇಟಿನ ಸುಂಟಿಕೊಪ್ಪ ವಿಭಾಗದ ವ್ಯವಸ್ಥಾಪಕರಾದ ಗೌತಮ್ ಮೈನಿ ಟಾಟಾ ಎಸ್ಟೇಟಿನ ಸಿಬ್ಬಂದಿಗಳಾದ ರೋಹನ್ ಮೇದಪ್ಪ, ಧರ್ಮಪ್ಪ, ರೋಹಿತ್, ಶ್ರೀಪತಿ, ಪ್ರೇಮಲೀಲಾ, ಧರಣೇಶ್ ಹಾಗೂ ತೋಟದ 50ಕ್ಕೂ ಹೆಚ್ಚು ಕಾರ್ಮಿಕ ವರ್ಗದವರು ಪಾಪ್ಲಿಕಾಡು ಗುಡ್ಡ ಜರಿದ ಜಾಗದಲ್ಲಿ 2050ಕ್ಕೂ ಹಿಟ್ಟಾ ವೆಟಿವೆಲ್ ಹುಲ್ಲುಗಳನ್ನು ನಾಟಿ ಮಾಡಿದರು.