ಕೂಡಿಗೆ, ಡಿ. 15: ಕಾವೇರಿ ಹಾರಂಗಿ ನದಿ ಸಂಗಮ ಗ್ರಾಮದಲ್ಲಿ ರುವ ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ 52ನೇ ವರ್ಷದ ರಥೋತ್ಸವ ತಾ. 20 ರಂದು ನಡೆಯಲಿದ್ದು, ಕೊರೊನಾ ಹಿನ್ನೆಲೆ ಈ ಬಾರಿ ಸರಳವಾಗಿ ಸಂಪ್ರದಾಯ ದಂತೆ ದೇವಾಲಯದ ಆವರಣದಲ್ಲಿ ನಡೆಸಲು ಸಮಿತಿಯು ತೀರ್ಮಾನ ಕೈಗೊಂಡಿದ್ದು, ಭಕ್ತರು ಸಹಕರಿಸುವಂತೆ ಸಮಿತಿ ಪ್ರಕಟಣೆ ಮೂಲಕ ಮನವಿ ಮಾಡಿದೆ.