ಮಡಿಕೇರಿ, ಫೆ. ೨೫: ರಾಜ್ಯದ ಒಕ್ಕಲಿಗ ಸಮುದಾ ಯದ ಅಭಿವೃದ್ಧಿ ಗಾಗಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು, ಸರ್ಕಾರದ ಸೌಲಭ್ಯ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊAಡು ಆದಿಚುಂಚನಗಿರಿ ಪೀಠಾಧಿಪತಿ ಗಳಾದ ಶ್ರೀನಿರ್ಮಲಾನಂದ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖರು ತೆಗೆದುಕೊಂಡಿರುವ ನಿರ್ಣಯಗಳಿಗೆ ಕೊಡಗು ಗೌಡ ಫೆಡರೇಷನ್ ಬದ್ಧವಾಗಿದೆ ಎಂದು ಫೆಡರೇಷನ್‌ನ ಅಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ ತಿಳಿಸಿದ್ದಾರೆ.

ಒಕ್ಕಲಿಗ ಸಮುದಾಯದಲ್ಲಿ ಸಾಕಷ್ಟು ಕುಟುಂಬಗಳು ಸಂಕಷ್ಟದ ಬದುಕು ಸಾಗಿಸುತ್ತಿದ್ದು, ಸಮುದಾ ಯದ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಅನಿವಾರ್ಯ ವಾಗಿದೆ. ಅಲ್ಲದೆ ಒಕ್ಕಲಿಗರ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಬೇಕು. ಪ್ರವರ್ಗ ೩ಎ ಪಂಗಡದ ಮೀಸಲಾತಿ ಪ್ರಮಾಣ ವನ್ನು ಶೇ. ೧೦ ಕ್ಕೆ ಏರಿಸುವುದ ರೊಂದಿಗೆ ಮೀಸಲಾತಿ ಸೌಲಭ್ಯ ನಗರ ಪ್ರದೇಶದ ಒಕ್ಕಲಿಗರಿಗೂ ಮತ್ತು ಒಕ್ಕಲಿಗ ಉಪಜಾತಿ ಜನತೆಗೂ ಲಭ್ಯವಾಗಬೇಕೆಂದು ಸಭೆಯಲ್ಲಿ ನಿರ್ಣಯಿಸಲಾಗಿದೆ. ಕೊಡಗು ಗೌಡ ಫೆಡರೇಷನ್‌ನ ಪ್ರತಿನಿಧಿಗಳು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದು ಈ ಬೇಡಿಕೆಗಳಿಗೆ ಅನುಮೋದನೆ ಸೂಚಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತುಮಕೂರಿನ ನಂಜಾವಧೂತ ಸ್ವಾಮೀಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಸಚಿವರುಗಳಾದ ಆರ್. ಅಶೋಕ್, ನಾರಾಯಣಗೌಡ, ಗೋಪಾಲಯ್ಯ, ಶಾಸಕರುಗಳು, ನಿವೃತ್ತ ಹಿರಿಯ ಒಕ್ಕಲಿಗ ಅಧಿಕಾರಿಗಳು ಹಾಗೂ ಒಕ್ಕಲಿಗ ಸಂಘದ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಒಕ್ಕಲಿಗ ಸಮುದಾ ಯದ ಬೇಡಿಕೆಗಳ ಬಗ್ಗೆ ಚರ್ಚಿಸ ಲಾಗಿದೆ. ನಂತರ ಸಚಿವರುಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿರುವ ಸೂರ್ತಲೆ ಸೋಮಣ್ಣ, ಒಕ್ಕಲಿಗರ ಬೇಡಿಕೆಗಳನ್ನು ತಕ್ಷಣ ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.