ಮಡಿಕೇರಿ, ಜೂ. ೧೭: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ನಿರ್ದೇಶನದಂತೆ ನಗರದ ದಾಸವಾಳ ರಸ್ತೆಯ ಹಳೆಯ ಕೆರೆಯ ಪ್ರದೇಶದಲ್ಲಿ ಉದ್ಯಾನವನ ನಿರ್ಮಾಣ ಮಾಡಬೇಕೆಂದು ಮೂಡಾ ಅಧ್ಯಕ್ಷ ರಮೇಶ್ ಹೊಳ್ಳ ಅವರಿಗೆ ಸ್ಥಳೀಯರು ಮನವಿಪತ್ರ ಸಲ್ಲಿಸಿದರು.

ಈ ಸಂದರ್ಭ ಬ್ರಹ್ಮಕುಮಾರಿ ಕೇಂದ್ರದ ಧನಲಕ್ಷಿ÷್ಮ, ಮಹದೇವಪೇಟೆ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸವಿತಾಭಟ್, ನಗರಸಭಾ ಸದಸ್ಯ ಬಶೀರ್ ಅಹ್ಮದ್, ರಿಜ್ವಾನ್, ಸಚಿನ್ ವಾಸುದೇವ್, ಸುರೇಶ್ ಕಾರಂತ್, ಶ್ಯಾಮ್ ಕೃಷ್ಣ ಮತ್ತಿತರರು ಹಾಜರಿದ್ದರು. ರಮೇಶ್ ಹೊಳ್ಳ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಉದ್ಯಾನವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.