ಮಡಿಕೇರಿ, ಜೂ. ೧೮: ಕಳೆದ ೪ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭಾಗಮಂಡಲ ದೇವಾಲಯ ರಸ್ತೆಯು ಸಂಪೂರ್ಣ ಕೆಸರುಮಯವಾಗಿದೆ. ವರ್ಷಗಳಿಂದಲೇ ನಡೆಯುತ್ತಿರುವ ಸೇತುವೆ ಕಾಮಗಾರಿಗೆ ನಿಲ್ಲಿಸಿರುವ ಕಂಬಗಳ ಅಡಪಾಯದಲ್ಲಿ ಕಿರು-ಕೆರೆಗಳೇ ಸೃಷ್ಟಿಯಾಗಿಬಿಟ್ಟಿವೆ. ಈ ವ್ಯಾಪ್ತಿಯಲ್ಲಿ ಹಲವು ಮನೆಗಳಿದ್ದು ನಿವಾಸಿಗಳು ಮನೆಯಿಂದ ಒಂದು ಹೆಜ್ಜೆ ಇಡಬೇಕಾದರೂ ಕೆಸರನ್ನು ಮೆಟ್ಟಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ.