ಇಂದು ಸಮಾರೋಪ

ಮಡಿಕೇರಿ, ಜೂ. ೧೮ : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಕೊಡಗು ಜಿಲ್ಲೆಯ ಗಾಯಕರಿಗೆ ಕೊರೊನಾ ಮರೆಯಲು ಭಾವಗೀತಾ ಸಪ್ತಾಹ ಗಾಯನ ಕಾರ್ಯಕ್ರಮವು ತಾ. ೧೩ರಂದು ನಡೆದ ಜಿಲ್ಲೆಯ ಹಿರಿಯ ಗಾಯಕ ಜಿ.ಚಿದ್ವಿಲಾಸ್ ಅವರಿಂದ ಉದ್ಘಾಟನೆಗೊಂಡಿದ್ದು ತಾ. ೧೯ ರಂದು (ಇಂದು) ಸಮಾರೋಪ ನಡೆಯಲಿದೆ.

ಏಳು ದಿನಗಳ ಕಾಲ ಸಂಜೆ ೫ ರಿಂದ ೬.೩೦ ರವರೆಗೆ ಗಾಯನ ಕಾರ್ಯಕ್ರಮ ನಡೆದಿದ್ದು, ೧೩೦ ಗಾಯಕರು ಭಾವಗೀತೆ ಹಾಡಿದ್ದಾರೆ. ತಾ ೧೯ರಂದು (ಇಂದು) ಸಂಜೆ ೫ ಗಂಟೆಗೆ ರಾಜ್ಯದ ಖ್ಯಾತ ಸುಗಮ ಸಂಗೀತ ಗಾಯಕ ಶಂಕರ್‌ಶಾನುಭೋಗ್ ಅವರು ಸಮಾರೋಪ ಸಮಾರಂಭದ ಉದ್ಘಾಟನೆ ಮಾಡಿ ಭಾವಗೀತೆ ಹಾಡಲಿದ್ದಾರೆ. ಅಲ್ಲದೆ ಜಿಲ್ಲೆಯ ೨೦ ಮಂದಿ ಗಾಯಕರು ಹಾಡಲಿದ್ದಾರೆ. ಗೂಗಲ್ ಮೀಟ್ ಮುಖಾಂತರ ಈ ಕಾರ್ಯಕ್ರಮ ನಡೆಯಲಿದೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೇಶವಕಾಮತ್ ಎಂ.ಪಿ. ಅವರು ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಬಳಗದ ಪ್ರಧಾನ ಕಾರ್ಯದರ್ಶಿ ವಿಲ್‌ಫ್ರೆಡ್ ಕ್ರಾಸ್ತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಈ ಕೆಳಗಿನ ಗೂಗಲ್ ಮೀಟ್ ಲಿಂಕ್ ಒತ್ತುವ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. hಣಣಠಿs://meeಣ.googಟe.ಛಿom/ಠಿve-ivಣಜಿ-ರಿso