ಮಡಿಕೇರಿ, ಜೂ. ೧೮: ಮಡಿಕೇರಿ ನಗರದಲ್ಲಿ ಸಾರ್ವಜನಿಕರಿಗೆ ಕೋವಿಡ್ ನಿರೋಧಕ ಲಸಿಕೆಯನ್ನು ಸಂತ ಮೈಕಲರ ಶಾಲೆಯಲ್ಲಿ ನೀಡಲಾಗುತ್ತಿತ್ತು. ಇದೀಗ ಇಲ್ಲಿ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಇದರ ಬದಲು ನಗರದ ಓಂಕಾರೇಶ್ವರ ದೇವಾಲಯದ ಓಂಕಾರ ಸದನ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜುಗಳಲ್ಲಿ ಲಸಿಕೆ ನೀಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹಾಗೂ ಕಾವೇರಿ ಕಲಾಕ್ಷೇತ್ರದಲ್ಲಿ ಈ ಹಿಂದಿನಿAದಲೂ ಲಸಿಕೆ ನೀಡಲಾಗುತ್ತಿದ್ದು, ಹಾಗೆಯೇ ಮುಂದುವರಿಯಲಿದೆ.