ಸಿದ್ದಾಪುರ, ಜೂ. ೧೯: ಕುಶಾಲನಗರ ವಲಯದ, ಮೀನುಕೊಲ್ಲಿ ಶಾಖೆಯ ವ್ಯಾಪ್ತಿಯ ಅಭ್ಯತ್‌ಮಂಗಲ, ನೆಲ್ಲಿಹುದಿಕೇರಿ, ಬೆಟ್ಟದಕಾಡು, ಕಾಟಿಬಾಣೆ, ಸಂಪಿಗೆಕೊಲ್ಲಿ, ಒಂಟಿಯAಗಡಿ, ವಾಲ್ನೂರು ತ್ಯಾಗತ್ತೂರು, ಕೂಡ್ಲೂರು ಚೆಟ್ಟಳ್ಳಿ ಭಾಗಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಓಡಿಸುವ ಕಾರ್ಯಾಚರಣೆ ಯನ್ನು ತಾ. ೨೦ರಂದು (ಇಂದು) ಹಾಗೂ ತಾ. ೨೧ರಂದು ಅರಣ್ಯ ಇಲಾಖೆ ಹಮ್ಮಿಕೊಂಡಿದೆ. ಕಾಫಿ ತೋಟದ ಮಾಲೀಕರು, ಕಾರ್ಮಿಕರು, ವಾಹನ ಸವಾರರು, ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದು ಕಾಡಾನೆ ಕಾರ್ಯಾಚರಣೆಯಲ್ಲಿ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಉಪ ವಲಯ ಅರಣ್ಯ ಅಧಿಕಾರಿ ಕೂಡಕಂಡಿ ಸುಬ್ರಾಯ ಕೋರಿದ್ದಾರೆ.