ಕೂಡಿಗೆ, ಜೂ. ೧೯: ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ ಹೆಬ್ಬಾಲೆ ಸರ್ಕಲ್ ಸಮೀಪ ಹಳೆಗೋಟೆಗೆ ಹೋಗುವ ಮಾರ್ಗದಲ್ಲಿ ರಸ್ತೆಗೆ ಹೊಂದಿಕೊAಡAತೆ ಚರಂಡಿ ಬಳಿ ಇರುವ ಅಂಗಡಿ ಮಳಿಗೆಯ ಮುಂಭಾಗದ ಗೋಡೆಗಳನ್ನು ತೆರವುಗೊಳಿಸಲಾಯಿತು.

ಅಂಗಡಿ ಮಳಿಗೆಯ ಮುಂಭಾಗ ಕಾಂಕ್ರಿಟ್ ರಸ್ತೆಯಿದ್ದು, ರಸ್ತೆಯ ನೀರು ಚರಂಡಿಯಲ್ಲಿ ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರು ಕೆಲ ಅಂಗಡಿಗಳಿಗೆ ನುಗ್ಗಿತ್ತು. ಕೆಲ ಅಂಗಡಿಯವರು ಮಳಿಗೆಯ ಮುಂಭಾಗ ತಾತ್ಕಾಲಿಕ ಸಿಮೆಂಟ್ ಗೋಡೆಗಳನ್ನು ಕಟ್ಟಿಕೊಂಡಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಅವುಗಳನ್ನು ತೆರವುಗೊಳಿಸಲು ಅಂಗಡಿ ಮಾಲೀಕರಿಗೆ ನೋಟೀಸ್ ನೀಡಲಾಗಿತ್ತು.

ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ತೀರ್ಮಾನದಂತೆ ಜೆ.ಸಿ.ಬಿ. ಯಂತ್ರದ ಮೂಲಕ ಅಂಗಡಿ ಮಳಿಗೆಯ ಮುಂಭಾಗ ಚರಂಡಿ ಮಾಡುವ ಕಾರ್ಯ ನಡೆಯುತ್ತಿದೆ.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ, ಅಭಿವೃದ್ಧಿ ಅಧಿಕಾರಿ ರಾಖೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.