ಮಡಿಕೇರಿ, ಸೆ. ೨೧: ನಗರದ ಶ್ರೀ ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ ೬೦ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದ್ದು, ಈ ಬಾರಿ ಆದಿಶಕ್ತಿಯಿಂದ ಶುಂಭ ನಿಶುಂಭರ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಅಮೆಮನೆ ದೇವಿಪ್ರಸಾದ್ ತಿಳಿಸಿದ್ದಾರೆ.

ಎರಡು ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಎರ್ನಾಕುಳಂನಿAದ ವಿಶೇಷ ಲೈಟಿಂಗ್ ಬೋರ್ಡ್ ಅನ್ನು ತರಿಸಲಾಗುತ್ತಿದೆ. ಕೊಚ್ಚಿನ್‌ನಿಂದ ಧ್ವನಿವರ್ಧಕ ಬರಲಿದ್ದು, ಸ್ಟುಡಿಯೋ ಲೈಟ್ಸ್ ವ್ಯವಸ್ಥೆಯನ್ನು ಮಡಿಕೇರಿಯ ಮರ್ಕರ ಪರ‍್ಸ್ನ ಲೋಕೇಶ್ ಮತ್ತು ತಂಡ ಮಾಡಲಿದೆ. ೨೪ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾವಿದರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ.

ಮಡಿಕೇರಿಯ ಜಯರಾಂ ಆಚಾರ್, ಶೇಖರ್, ರಾಕಿ, ಜನ್ನು, ಉಮೇಶ್ ತಂಡ ಪ್ಲಾಟ್‌ಫಾರಂ ನಿರ್ಮಾಣ ಮಾಡಲಿದ್ದು, ಕಲಾಕೃತಿಗಳಿಗೆ ಚಲನವಲನವನ್ನು ಮಡಿಕೇರಿಯ ಸಿಆರ್ ಬಾಯ್ಸ್ ತಂಡ ನೀಡಲಿದೆ. ವಿಠಲ ಮತ್ತು ತಂಡದವರು ಟ್ರಾö್ಯಕ್ಟರ್ ಸೆಟ್ಟಿಂಗ್ಸ್ ಮಾಡಲಿದ್ದಾರೆ. ಬೆಂಗಳೂರಿನ ಫೈರ್‌ಟ್ರೋನಿಕ್ಸ್ ಕಂಪೆನಿಯ ರಘುಶ್ರಾಫ್ ತಂಡ ಸ್ಪೆಷಲ್ ಎಫೆಕ್ಟ್ ವ್ಯವಸ್ಥೆ ಮಾಡಲಿದೆ. ಒಟ್ಟು ೧೮ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆಯೊಂದಿಗೆ ಬಹುಮಾನಕ್ಕೆ ಪೈಪೋಟಿ ನೀಡಲಾಗುತ್ತದೆ ಎಂದು ದೇವಿಪ್ರಸಾದ್ ಮಾಹಿತಿಯಿತ್ತರು.

-ಉಜ್ವಲ್ ರಂಜಿತ್