ಮಡಿಕೇರಿ, ಸೆ. ೨೧: ಕೊಡಗು ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳು ರೈತರಿಗೆ ರಸಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ ಮಾರಾಟ ಸಂಬAಧಿಸಿದAತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ನಡೆಯಿತು.

ನಗರದ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಸುದೀರ್ಘವಾಗಿ ಚರ್ಚೆ ನಡೆಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, ಜಿಲ್ಲೆಯಲ್ಲಿರುವ ಸಹಕಾರ ಸಂಘಗಳು ರೈತರಿಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದು, ತಾ. ೮ ರಂದು ವೀರಾಜಪೇಟೆಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಸಹಕಾರ ಸಂಘಗಳ ಮೂಲಕ ರೈತರಿಗೆ ಗೊಬ್ಬರ ಜೊತೆಯಲ್ಲಿ ಲಘು ಪೋಷಕಾಂಶ ಗಳನ್ನು ಜೋಡಿಸಿ ವಿತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ದೂರುಗಳು ಬಂದಲ್ಲಿ ರಸಗೊಬ್ಬರ ನಿಯಂತ್ರಣ ಆದೇಶ ೧೯೮೫ ರಂತೆ ಕ್ರಮ ಕೈಗೊಳ್ಳುವುದಾಗಿ ಹಾಗೂ ಗೊಬ್ಬರ ಮಾರಾಟದ ಪರವಾನಗಿ ಯನ್ನು ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಜಿಲ್ಲೆಯ ಸಹಕಾರ ಸಂಘಗಳಿAದ ಲಘು ಪೋಷಕಾಂಶಗಳಿಗೆ ಬೇಡಿಕೆ ಇಲ್ಲದಿದ್ದರೂ ರಸಗೊಬ್ಬರ ಸರಬರಾಜು ಮಾಡುವ ವಿತರಕರು ಪೋಷಕಾಂಶಗಳನ್ನು ಗೊಬ್ಬರದ ಜೊತೆಯಲ್ಲಿ ಲಿಂಕ್ ಮಾಡಿ ಕಳುಹಿಸುತ್ತಿರುವುದು ಎಲ್ಲರಿಗೂ ಮಾಹಿತಿ ಇದೆ. ಈ ಬಗ್ಗೆ ಇತ್ತೀಚಿಗೆ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಶಾಸಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದಾಗ ರೈತರ ಮನವೊಲಿಸಿ ಲಘು ಪೋಷಕಾಂಶಗಳನ್ನು ವಿತರಿಸುವಂತೆ ಜಂಟಿ ನಿರ್ದೇಶಕರು ಸಭೆಯಲ್ಲಿ ಸಲಹೆ ನೀಡಿರುತ್ತಾರೆ. ಗೊಬ್ಬರ ವಿತರಕ ಸಂಸ್ಥೆಯವರು ೧೩ ಟನ್ ಎಂಒಪಿ ಗೊಬ್ಬರಕ್ಕೆ ೨ ಟನ್ ಪಾಲಿ ಸಲ್ಪೇಟ್ ಹಾಗೂ ೧೩ ಟನ್ ಯೂರಿಯಾದ ಜೊತೆಯಲ್ಲಿ ೨೪ ಲೀಟರ್ ನ್ಯಾನೋ ಯೂರಿಯಾವನ್ನು ಜೋಡಿಸಿ ಕಳುಹಿಸುತ್ತಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ದೂರಿದರು.

ರೈತರಿಗೆ ಲಘು ಪೋಷಕಾಂಶಗಳನ್ನು ವಿತರಿಸಬೇಕಾದ ಅನಿವಾರ್ಯತೆ ಸಹಕಾರ ಸಂಘಗಳಿಗೆ ಎದುರಾಗಿದೆ. ಈ ವಿಚಾರವು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರ ಗಮನಕ್ಕೂ ಬಂದಿರುತ್ತದೆ. ಆದರೂ ಸಹ ಎಲ್ಲಾ ಸಹಕಾರ ಸಂಘಗಳಿಗೆ ರಸಗೊಬ್ಬರ ನಿಯಂತ್ರಣ ಆದೇಶ ೧೯೮೫ ರಂತೆ ಕ್ರಮ ಕೈಗೊಳ್ಳುವುದಾಗಿ ಹಾಗೂ ಗೊಬ್ಬರ ಮಾರಾಟದ ಪರವಾನಗಿಯನ್ನು ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುವುದು ಸರಿಯಲ್ಲ ಎಂದರು.

ಡಿ.ಸಿ.ಸಿ.ಬ್ಯಾAಕಿನ ಅಧ್ಯಕ್ಷರು, ಜಿಲ್ಲಾಧಿಕಾರಿಯವರು, ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತಾಲೂಕು ಸಹಾಯಕ ನಿರ್ದೇಶಕರು, ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಗೊಬ್ಬರ ವಿತರಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

ಬಳಿಕ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ. ಷೇಕ್ ಅವರು ರಸಗೊಬ್ಬರ ಪೂರೈಕೆ ಸಂಬAಧಿಸಿ ದಂತೆ ಜಿಲ್ಲೆಗೊಂದು ನೀತಿ ಮಾಡಿದರೆ ಒಳ್ಳೆಯದು. ಕೃಷಿಗೆ ಸಂಬAಧಿಸಿದAತೆ ಭತ್ತ ಮತ್ತು ಮುಸುಕಿನ ಜೋಳ ಕೃಷಿ ಮಂಡಳಿಗೆ ಪತ್ರ ಬರೆದು ರಸಗೊಬ್ಬರ ಬೇಡಿಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೊಡಗು ಜಿಲ್ಲೆಗೆ ದರ ನಿಗಧಿಯಾಗಿಲ್ಲ. ಈ ಬಗ್ಗೆ ಕೃಷಿ ಸಚಿವರ ಗಮನಕ್ಕೆ ತರಲಾಗಿದೆ ಎಂದರು.

ನಂತರ ಗೊಬ್ಬರ ವಿತರಕ ಸಂಸ್ಥೆಯವರು ಮಾತನಾಡಿ ಕೊಡಗು ಜಿಲ್ಲೆಗೆ ಇನ್ನು ಮುಂದೆ ಲಘು ಪೋಷಕಾಂಶಗಳನ್ನು ಒತ್ತಾಯ ಪೂರ್ವಕವಾಗಿ ಸರಬರಾಜು ಮಾಡುವುದಿಲ್ಲ ಹಾಗೂ ಗೊಬ್ಬರದ ಜೊತೆಯಲ್ಲಿ ಲಿಂಕ್ ಮಾಡುವುದಿಲ್ಲ ಎಂದು ಸಭೆಗೆ ಆಶ್ವಾಸನೆ ನೀಡಿದರು.

ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಮಾತನಾಡಿ ಸಹಕಾರ ಸಂಘಗಳ ಮೂಲಕ ರಸಗೊಬ್ಬ್ಬರ ಮಾರುವವರ ಸಮಸ್ಯೆಗಳಿಗೆ ಸ್ಪಂದಿಸ ಲಾಗುವುದು. ತಮ್ಮ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗು ವುದು ಎಂದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಪೂವಯ್ಯ, ನಿರ್ದೇಶಕರಾದ ರಮೇಶ್, ರಘು ನಾಣಯ್ಯ, ಅರುಣ್ ಭೀಮಯ್ಯ, ಸಹಕಾರ ಸಂಘಗಳ ಉಪ ನಿಬಂಧಕ ಹೆಚ್.ಎನ್. ರಮೇಶ್, ಇತರರು ಇದ್ದರು.