*ಗೋಣಿಕೊಪ್ಪ, ಸೆ. ೨೨: ಗೋಣಿಕೊಪ್ಪ ದಸರಾ ತಾ. ೨೪ ಮತ್ತು ೨೫ ರಂದು ಶ್ರೀಕಾವೇರಿ ದಸರಾ ಸಮಿತಿ ಹಾಗೂ ಸೌತ್ಕೂರ್ಗ್ ಫಾಮರ್ಸ್ ಅಸೋಸಿಯೇಷನ್ ವತಿಯಿಂದ ಹರಿಶ್ಚಂದ್ರಪುರ ಮನೆಯಪಂಡ ಯಾರ್ಡ್ನಲ್ಲಿ ೨೦ ನೇ ವರ್ಷದ ಆಟೋಕ್ರಾಸ್ ರ್ಯಾಲಿ ಆಯೋಜಿಸಲಾಗಿದೆ ಎಂದು ಸೌತ್ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ. ಕೆ. ಬೋಪಣ್ಣ ತಿಳಿಸಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ಲಾಂಛನಾ ಬಿಡುಗಡೆಗೊಳಿಸಿ ಮಾತನಾಡಿ, ಸೆ. ೨೪ ರಂದು ದ್ವಿಚಕ್ರ, ೨೫ ರಂದು ನಾಲ್ಕುಚಕ್ರ ರ್ಯಾಲಿ ನಡೆಯಲಿದೆ. ಮಹಿಳೆಯರಿಗೆ ಲೇಡಿಸ್ ಕ್ಲಾಸ್ ವಿಭಾಗದಲ್ಲಿ ಕಾರು ರ್ಯಾಲಿ ಸ್ಪರ್ಧೆ ಇದೆ. ರಾಷ್ಟç, ಅಂರ್ರಾಷ್ಟಿçÃಯ ಮಟ್ಟದ ರ್ಯಾಲಿ ಪಟುಗಳು ಕೂಡ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ೨೦೦ ಕ್ಕೂ ಹೆಚ್ಚು ವಾಹನ ಪಾಲ್ಗೊಳುತ್ತಿವೆ. ದೂರದಿಂದ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ಪ್ರೋತ್ಸಾಹಿಸಲು ೨ ಪಟುಗಳಿಗೆ ಏರ್ ಟಿಕೆಟ್ ನೀಡಲಾಗುವುದು. ನಾಲ್ಕುಚಕ್ರ ಚಾಂಪಿಯನ್ಗೆ ೧ ಲಕ್ಷ, ದ್ವಿಚಕ್ರ ಚಾಂಪಿಯನ್ಗೆ ೨೫ ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.
ಒಟ್ಟು ೨೫ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಉತ್ತಮ ಛಾಯಾಚಿತ್ರಕ್ಕೆ ಬೆಸ್ಟ್ ಫೋಟೋಗ್ರಫಿ ಬಹುಮಾನ ಕೂಡ ನೀಡಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿ ಪ್ರ. ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಖಜಾಂಚಿ ಗಾಂಧಿ ದೇವಯ್ಯ, ಸೌತ್ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ಸದಸ್ಯರಾದ ಪಂದ್ಯAಡ ಹರೀಶ್, ಬೇರೇರ ಸೂರಜ್ ಇದ್ದರು.