ಸುAಟಿಕೊಪ್ಪ, ನ. ೨೧: ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟ್ಯಾಂಕರ್ ಲಾರಿ ಹೊಟೇ ಲ್‌ಗೆ ನುಗ್ಗಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಕುಶಾಲನಗರದಿಂದ ಮಂಗಳೂರಿಗೆ ತಾ. ೨೦ ರ ರಾತ್ರಿ ೧೧.೩೦ ಗಂಟೆಗೆ ರಾಷ್ಟಿçÃಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಲಾರಿ ಗದ್ದೆಹಳ್ಳದ ಮಸೀದಿ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಹಂಸ ಎಂಬವರ ಹೊಟೇಲ್‌ಗೆ ನುಗ್ಗಿದೆ.

ಹೊಟೇಲ್ ಹಾಗೂ ಪಕ್ಕದ ಕೆ.ಕೆ. ಸೌಂಡ್ಸ್ ಶಾಮಿಯಾನ ಮಳಿಗೆಗೂ ಅಪಾರ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿ ಸಲಿಲ್ಲ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.