ಕುಶಾಲನಗರ, ನ. ೨೧ : ಕನ್ನಡ ಸಾಹಿತ್ಯ ಪರಿಷತ್ತಿನ ಕರ್ನಾಟಕ ಸುವರ್ಣ ಸಂಭ್ರಮ ಹಾಗೂ ಹೆಬ್ಬಾಲೆ ಬನಶಂಕರಿ ಹಬ್ಬದ ಜಾತ್ರೆ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಹೆಬ್ಬಾಲೆ ವಲಯ ಘಟಕದ ವತಿಯಿಂದ ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ಡಿ.೧೦ ರಂದು ಬನಶಂಕರಿ ದೇವಸ್ಥಾನ ಆವರಣದಲ್ಲಿ ಮಧ್ಯಾಹ್ನ ೩ ಗಂಟೆಗೆ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಕವಿಗೋಷ್ಠಿಗೆ ಭಾಗವಹಿಸುವ ಉದಯೋನ್ಮುಖ ಕವಿಗಳು ತಮ್ಮ ಸ್ವರಚಿತ ಕವನ ದೊಂದಿಗೆ ತಾ. ೩೦ ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹೆಬ್ಬಾಲೆ ಕಸಾಪ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸುವ ಆಸಕ್ತ ಕವಿಗಳು ಎಂ.ಎನ್. ಮೂರ್ತಿ ೯೪೪೯೦೦೮೦೯೯ ಇವರಲ್ಲಿ ತಮ್ಮ ಹೆಸರು ನೋಂದಾಯಿ ಸಿಕೊಳ್ಳಲು ಮನವಿ ಮಾಡಿದ್ದಾರೆ.

ಆಸಕ್ತರು ತಮ್ಮ ಕವನವನ್ನು ಅಧ್ಯಕ್ಷರು, ಕ.ಸಾ.ಪ. ಹೆಬ್ಬಾಲೆ ವಲಯ ಘಟಕ, ಕುಶಾಲನಗರ ತಾಲೂಕು - ಇಲ್ಲಿಗೆ ತಾ. ೩೦ ರೊಳಗಾಗಿ ಕಳಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.