ಶ್ರೀಮಂಗಲ, ಫೆ. ೧೦: ಬಗರ್ ಹುಕುಂ ಸಾಗುವಳಿ ಸಕ್ರಮಿಕರಣ ಸಮಿತಿ ನೂತನ ಅಧ್ಯಕ್ಷರಾಗಿ ಅಣ್ಣಳಮಾಡ ಲಾಲಾ ಅಪ್ಪಣ್ಣ ಅವರನ್ನು ನೇಮಿಸಿದ ಹಿನ್ನೆಲೆ ಅವರ ಮನೆಗೆ ತೆರಳಿದ ಹಿತೈಷಿಗಳು ಸನ್ಮಾನಿಸಿದರು.

ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಕೇರಳ ರಾಜ್ಯದ ಗಡಿಯಲ್ಲಿರುವ ಪರಕಟಗೇರಿ ಗ್ರಾಮದ ಬೆಳೆಗಾರ ಲಾಲಾ ಅಪ್ಪಣ್ಣ ಅವರನ್ನು ಗುರುತಿಸಿ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರ ಶಿಫಾರಸ್ಸಿನಂತೆ ನೇಮಕ ಮಾಡಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ, ಮೌಲ್ಯಯುತ ವ್ಯಕ್ತಿತ್ವ, ರಾಜಕಾರಣಕ್ಕೆ ಸಂದ ಗೌರವ ಎಂದ ಹಿತೈಷಿಗಳು, ಲಾಲಾ ಅಪ್ಪಣ್ಣ ಅವರು ನೀಡಿರುವ ಜವಾಬ್ದಾರಿ ಯನ್ನು ಯಶಸ್ವಿಯಾಗಿ, ಕ್ರೀಯಾ ಶೀಲರಾಗಿ ನಿಭಾಯಿಸುವ ಸಾಮರ್ಥ್ಯ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರ ಶಿಫಾರಸ್ಸಿನಂತೆ ನೇಮಕ ಮಾಡಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ, ಮೌಲ್ಯಯುತ ವ್ಯಕ್ತಿತ್ವ, ರಾಜಕಾರಣಕ್ಕೆ ಸಂದ ಗೌರವ ಎಂದ ಹಿತೈಷಿಗಳು, ಲಾಲಾ ಅಪ್ಪಣ್ಣ ಅವರು ನೀಡಿರುವ ಜವಾಬ್ದಾರಿ ಯನ್ನು ಯಶಸ್ವಿಯಾಗಿ, ಕ್ರೀಯಾ ಶೀಲರಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭ ಕುಪ್ಪಣಮಾಡ ಪ್ರೀತಮ್, ಬೊಳ್ಳೆರ ಪೊನ್ನಪ್ಪ, ಬುಟ್ಟಿಯಂಡ ನಾಣಯ್ಯ, ಬೋಪಯ್ಯ, ಗಪ್ಪಣ್ಣ, ಕಾಳಿಮಾಡ ರಶಿಕ, ಬನ್ಸಿ ಕರ್ತಮಾಡ ನಂದ, ಕಳಕಂಡ ಜೀತು ಕುಶಾಲಪ್ಪ, ಮದನ್, ಕುಪ್ಪಣಮಾಡ ಪೂಣಚ್ಚ ಅಣ್ಣಳಮಾಡ ಚಿಣ್ಣಪ್ಪ, ಗಿರೀಶ್, ರಾಬಿನ್, ಅಮನ್, ರಾಜ, ಮಿಲಿ ಅಪ್ಪಣ್ಣ, ನೆಲ್ಲೀರ ಸೋಮಣ್ಣ ಮತ್ತಿತರರು ಹಾಜರಿದ್ದರು.