ಮಡಿಕೇರಿ, ಫೆ. ೧೩: ಜಿಲ್ಲಾ ಕಾಂಗ್ರೆಸ್ ಸದಸ್ಯರಲ್ಲಿ ಮೂಡಿರುವ ಅಸಮಾಧಾನವನ್ನು ಸರಿಪಡಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಲಾಗುವದೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದ್ದಾರೆ.

ನಿನ್ನೆ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಲೋಕೇಶ್ ಮುಂದಾಳತ್ವದಲ್ಲಿ ನಡೆದ ಅಸಮಾಧಾನಿತರ ಸಭೆಯಲ್ಲಿ ಸೇರಿದ್ದ ಕಾಂಗ್ರೆಸಿಗರು ಪಕ್ಷದಲ್ಲಿ ಕಡೆಗಣನೆ ಮಾಡುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಅವರ ಸಮ್ಮುಖದಲ್ಲೇ, ಪಕ್ಷದಲ್ಲಿ ಹುದ್ದೆಗಳನ್ನು ನೀಡದಿರುವ ಬಗ್ಗೆ, ಹಿರಿಯರನ್ನು ಕಡೆಗಣಿಸಿ ಹೊಸದಾಗಿ ಬಂದÀವರಿಗೆ ಮಣೆ ಹಾಕುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಸಕರು ಕಡೆಗಣಿಸಿರುವ ಬಗ್ಗೆ ದೂರಿಕೊಂಡಿದ್ದರು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಮಂಥರ್ ಗೌಡ ಅವರು; ಕೆಲವರು ಸೇರಿ ಸಭೆ ಮಾಡಿದ್ದಾರೆ. ಎಲ್ಲವನ್ನೂ ಸರಿಪಡಿಸಲಾಗುವದು. ಅಸಮಾಧಾನ ಇರುವದನ್ನು ಹೇಳಿಕೊಂಡರೆ ಮಾತುಕತೆ ನಡೆಸಿ ಬಗೆಹರಿಸಿ ಎಲ್ಲರನ್ನು ಒಂದುಗೂಡಿಸಿಕೊAಡು ಹೋಗಲಾಗುವದು ಎಂದು ಹೇಳಿದ್ದಾರೆ.