ಮಡಿಕೇರಿ, ಫೆ. ೧೩: ಇತ್ತೀಚೆಗೆ ನಡೆದ ಪ್ರತಿಷ್ಠಿತ ಆಸ್ಟೆçÃಲಿಯನ್ ಓಪನ್ ಟೆನ್ನಿಸ್ ಗ್ರಾö್ಯಂಡ್‌ಸ್ಲಾಮು ಟೂರ್ನಿಯ ಡಬಲ್‌ನಲ್ಲಿ ಜಯ ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಕೊಡಗಿನ ಹೆಮ್ಮೆಯ ಟೆನ್ನಿಸ್ ತಾರೆ ಮಚ್ಚಂಡ ರೋಹನ್ ಬೋಪಣ್ಣ ಅವರಿಗೆ ರಾಜ್ಯ ಸರಕಾರದಿಂದ ರೂ. ೫೦ ಲಕ್ಷ ಬಹುಮಾನ ಘೋಷಿಸಲಾಗಿದೆ.

ವಿಶ್ವ ನಂ.೧ ರ‍್ಯಾಂಕಿAಗ್‌ನ ಹಾಗೂ ಪದ್ಮಶ್ರೀ ರೋಹನ್ ಬೋಪಣ್ಣ ಅವರನ್ನು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತರ ಪ್ರಮುಖರೊಂದಿಗೆ ಅಭಿನಂದಿಸಿ ಬಹುಮಾನ ಪ್ರಕಟಿಸಿದ್ದಾರೆ.

ಈ ಸಂದರ್ಭ ಸಚಿವರುಗಳಾದ ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ರೋಹನ್ ಅವರ ಪೋಷಕರಾದ ಮಚ್ಚಂಡ ಬೋಪಣ್ಣ ಹಾಗೂ ಮಲ್ಲಿಕಾ ಹಾಜರಿದ್ದರು.