ಮುಳ್ಳೂರು, ಫೆ. ೧೪: ಸಮೀಪದ ಆಲೂರುಸಿದ್ದಾಪುರ ೬೬/೧೧ ಕೆ.ವಿ.ವಿದ್ಯುತ್ ಉಪಕೇಂದ್ರದ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿAದ ತಾ. ೧೫ ರಂದು (ಇಂದು) ಮತ್ತು ತಾ. ೧೬ ರಂದು (ನಾಳೆ) ಎರಡು ದಿನ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆವರೆಗೆ ಉಪಕೇಂದ್ರದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ ವಿತರಣಾ ಕೇಂದ್ರ ವ್ಯಾಪ್ತಿಯ ಗೋಣಿಮರೂರು, ಆಲೂರುಸಿದ್ದಾಪುರ, ಮಾಲಂಬಿ, ಬಾಣಾವರ, ಹೊಸಗುತ್ತಿ, ಕೈಸರವಳ್ಳಿ, ಸಿದ್ದಲಿಂಗಪುರ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಸೋಮವಾರಪೇಟೆ ಚೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿದೆ.