ಮಡಿಕೇರಿ, ಫೆ. ೧೩: ಒಂದೆ ದಿನದಂದು ಜೀತ ವಿಮುಕ್ತಿ ಹಾಗೂ ಜಾತಿ ನಿಂದನೆ ಕಾಯ್ದೆಯಡಿ ೮ ಪ್ರಕರಣಗಳು ಕುಟ್ಟ ಹಾಗೂ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾ. ೧೦ ರಂದು ಈ ಸಂಬAಧದ ದೂರುಗಳು ಬಂದಿವೆ. ಪೊನ್ನಂಪೇಟೆ ತಾಲೂಕಿನ ಕುಟ್ಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರು ಪ್ರಕರಣಗಳು ದಾಖಲಾಗಿದ್ದು, ಗೋಣಿಕೊಪ್ಪದಲ್ಲಿ ೨ ಪ್ರಕರಣ ವರದಿಯಾಗಿದೆ.

ನಾಲ್ಕೇರಿ ಗ್ರಾಮದ ಡಿ ಉತ್ತಯ್ಯ, ಕೆ.ಬಾಡಗ ಗ್ರಾಮದ ಕೆ ಅಪ್ಪಣ್ಣ, ಕೊತೋರು ಗ್ರಾಮದ ಪರಮೇಶ್ವರ, ವಿ ಗಣೇಶ್, ಕೆ. ಬಾಡಗ ಗ್ರಾಮದ ಎಂ. ರೋಹಿತ್ ಸುಬ್ಬಯ್ಯ, ನಾಲ್ಕೇರಿ ಗ್ರಾಮದ ಕೆ. ಅಯ್ಯಪ್ಪ ಅವರುಗಳ ವಿರುದ್ಧ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾದರೆ, ಗೋಣಿಕೊಪ್ಪಲು ಠಾಣಾ ವ್ಯಾಪ್ತಿಯಲ್ಲಿ ಹಾತೂರು ಗ್ರಾಮದ ವಿ.ರಾಮಚಂದ್ರ, ಧನುಗಾಲ ಗ್ರಾಮದ ಚೋಟು ಅಯ್ಯಪ್ಪ ಅವರ ಮೇಲೆ ಎಫ್.ಐ.ಆರ್. ಆಗಿದೆ.

ಪೊನ್ನಂಪೇಟೆ ತಾಲೂಕಿನಲ್ಲಿ ಎಂಟು ಪ್ರಕರಣಗಳು ದಾಖಲುಗೊಂಡಿದ್ದು ಈ ಬಗೆ ತನಿಖೆಯನ್ನು ಕೈಗೊಂಡು ಸೂಕ್ತ ಸಾಕ್ಷಾö್ಯದರಗಳನ್ನು ಕಲೆ ಹಾಕಿ ಆರೋಪಿಗಳನ್ನು ಬಂಧಿಸಲಾಗುವುದು. ಇದೀಗ ತನಿಖೆ ನಡೆಯುತ್ತಿದೆ ಎಂದು ವೀರಾಜಪೇಟೆ ಡಿವೈಎಸ್‌ಪಿ ಮೋಹನ್ ಕುಮಾರ್ ತಿಳಿಸಿದ್ದಾರೆ.