ಮಡಿಕೇರಿ, ಫೆ. ೧೩: ಬಿಜೆಪಿ ಪಕ್ಷದ ಮೇಲಾಗಲೀ, ನಾಯಕರು, ಕಾರ್ಯ ಕರ್ತರ ಬಗ್ಗೆ ನನಗೆ ಯಾವದೇ ಅಸಮಾಧಾನವಿಲ್ಲ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.

ಪಕ್ಷದ ಪದಾಧಿಕಾರಿಗಳ ಆಯ್ಕೆ ಸಂಬAಧ ಬೋಪಯ್ಯ ಅವರನ್ನು ಕಡೆಗಣಿಸಲಾಗಿದ್ದು, ಅವರು ಅಸಮಾಧಾನಗೊಂಡಿದ್ದಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬಂದಿತ್ತು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಬೋಪಯ್ಯ ಅವರು; ನನಗೆ ಯಾರ ಮೇಲೆಯೂ ಅಸಮಾಧಾನ, ಮುನಿಸು ಇಲ್ಲ. ಮೊನ್ನೆ ಕಾರ್ಯಕಾರಿಣಿ ಸಭೆ ನಡೆದ ಸಂದರ್ಭ ತಾನು ಮೈಸೂರಿನಲ್ಲಿ ನಡೆದ ಅಮಿತ್ ಷಾ ಅವರ ಸಭೆಗೆ ತೆರಳಿದ್ದೆ, ಹಾಗಾಗಿ ಇಲ್ಲಿಯ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಪ್ರಮುಖ ಸಭೆಗಳಿಗೆ ಖಂಡಿತಾ ಹಾಜರಾಗು ತ್ತೇನೆ. ಪದಾಧಿಕಾರಿಗಳ ಆಯ್ಕೆ ಸಂಬAಧ ಸಲಹೆ ಕೇಳಿದ್ದರು. ಕೆಲವರ ಹೆಸರುಗಳನ್ನು ಪದಾಧಿಕಾರಿ ಸ್ಥಾನಕ್ಕೆ ಸೂಚನೆ ಕೂಡ ಮಾಡಿದ್ದೇನೆ. ಕೆಲವರು ಇಲ್ಲ ಸಲ್ಲದ ಅಪಪ್ರಚಾರ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು. ಯಾವದೇ ಕಾರಣಕ್ಕೂ ಪಕ್ಷ ಹಾಳಾಗಲು ಬಿಡುವದಿಲ್ಲ. ಮುಂದೆ ಚುನಾವಣೆ ಬರುತ್ತಿವೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವದಾಗಿ ಅವರು ಹೇಳಿದರು.