ಸೋಮವಾರಪೇಟೆ, ಫೆ. ೧೫: ಇಲ್ಲಿನ ಆಲೆಕಟ್ಟೆ ಸಾರ್ವಜನಿಕ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮೊದಲ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಶ್ರೀನಿವಾಸ ಕಲ್ಯಾಣ ಕಾರ್ಯ ಕ್ರಮದಲ್ಲಿ ಮಂಗಳವಾರ ಬೆಳಿಗ್ಗೆ ಶ್ರೀನಿವಾಸ ಕಲ್ಯಾಣ ಪೂಜಾ ಕಾರ್ಯಕ್ರಮ ನಡೆಯಿತು. ನಂತರ ಮಹಾ ಮಂಗಳಾರತಿ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಅರ್ಚಕರುಗಳಾದ ರಾಘವೇಂದ್ರ ಭಟ್ ನೇತೃತ್ವದಲ್ಲಿ ತಾಕೇರಿ ಗುರುಪ್ರಸಾದ್, ಸುರೇಶ್ ಪೂಜಾ ಕಾರ್ಯ ನಡೆಸಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎನ್.ಪಿ. ಭೀಮಯ್ಯ, ಉಪಾಧ್ಯಕ್ಷರುಗಳಾದ ಮಹೇಶ್ ತಿಮ್ಮಯ್ಯ, ಪೆರುಮಾಳ್, ಪ್ರಧಾನ ಕಾರ್ಯದರ್ಶಿ ಹೆಚ್. ಮಂಜುನಾಥ್, ನಿರ್ದೇಶಕರಾದ ಸಿ.ಕೆ. ಮೋಹನ್, ಬಿ.ಡಿ. ಗೋವಿಂದ, ಪ್ರಮುಖರಾದ ಟಿ.ಪಿ. ಚಂಗಪ್ಪ, ಪ್ರಕಾಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ವಿಭಾಗದ ರಾಮ್‌ದಾಸ್ ಮತ್ತಿತರರು ಇದ್ದರು.