ನಾಪೋಕ್ಲು, ಫೆ. ೧೬: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಷೇತ್ರದ ಕೂರುಳಿ ಸುಭಾಷ್‌ನಗರ ಪರಮೇಶ್ವರಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿ ಕೋತ್ಸವವನ್ನು ಕೂರುಳಿ ಸುಭಾಷ್ ನಗರ ಭವನದಲ್ಲಿ ನಡೆಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪುರುಷೋತ್ತಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಸದಸ್ಯರಿಗೆ ಜ್ಞಾನ ವಿಕಾಸದ ಬಗ್ಗೆ ಮೇಲ್ವಿಚಾರಕರು ಸದಸ್ಯರಿಗೆ ಸುರಕ್ಷಾ ಆರೋಗ್ಯ, ರಕ್ಷಾ ಹಿಡುವಳಿ ಯೋಜನೆ ಬಗ್ಗೆ ಉತ್ತಮವಾದ ಮಾಹಿತಿ ಮಾರ್ಗದರ್ಶನದ ಮಾಹಿತಿ ನೀಡಿದರು. ಆನಂತರ ವಿವಿಧ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸ ಲಾಗಿದ್ದು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸದಸ್ಯರಿಗೆ ಬಹುಮಾನವನ್ನು ವಿತರಿಸಿದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಧಿಕಾರಿ ಮಾಲಿನಿ ಸೇವಾಪ್ರತಿನಿಧಿ ಉಮಾಲಕ್ಷಿö್ಮ ಹಾಗೂ ಪರಮೇಶ್ವರಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಹಾಜರಿದ್ದರು.