ಕೂಡಿಗೆ, ಫೆ. ೧೬: ಸಂವಿಧಾನದ ತಳಹದಿ ಎಲ್ಲರಿಗೂ ಸಮಾನತೆ, ಸಮಬಾಳು ಕಲ್ಪಿಸಿದೆ. ಇಂತಹ ಅಮೂಲ್ಯ ಸಂವಿಧಾನವನ್ನು ದೇಶಕ್ಕೆ ಕೊಡುಗೆ ನೀಡಿದ ಡಾ. ಬಿ.ಅರ್. ಅಂಬೇಡ್ಕರ್ ಅವರು ಓರ್ವ ಮಹಾನ್ ಚೇತನ ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ತಿಳಿಸಿದರು.

ಅವರು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಸಭಾ ಕಾರ್ಯಕ್ರಮವನ್ನು ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ದೇಶಕ್ಕಾಗಿ, ಸ್ವಾತಂತ್ರö್ಯಕ್ಕಾಗಿ ಹಲವರು ಹೋರಾಡಿ ಮಡಿದಿದ್ದಾರೆ. ಅಂತೆಯೇ ಸಂವಿಧಾನ ರಚಿಸುವ ಮೂಲಕ ಜನಸಾಮಾನ್ಯರ ಹಿತ ಕಾಯುವ ಆಯುಧದಂತೆ ಅಂಬೇಡ್ಕರ್ ಸಂವಿಧಾನ ರೂಪಿಸಿದ್ದಾರೆ.

ಇಂತಹ ಮಹಾನ್ ಗ್ರಂಥದ ಆಶಯವನ್ನು ಎಲ್ಲರೂ ಪರಿಪಾಲಿಸಬೇಕಿದೆ. ರಾಷ್ಟç ರಕ್ಷಣೆಗೆ, ಅಭಿವೃದ್ಧಿ, ಜನಹಿತ, ಶಾಂತಿ, ಸುವ್ಯವಸ್ಥೆ ನಿರಂತರವಾಗಿ ನೆಲೆನಿಲ್ಲಲ್ಲು ಪ್ರಜೆಗಳು ಕಾರಣೀಭೂತರಾಗಬೇಕಿದೆ ಎಂದರು. ಸ್ಥಳೀಯ ಪ್ರೌಢಶಾಲಾ ಶಿಕ್ಷಕ ನಾಗರಾಜ್ ಸಂವಿಧಾನ ಮಹತ್ವದ ಕುರಿತು ಭಾಷಣ ಮಾಡಿದರು. ಇದೇ ಸಂದರ್ಭ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ vಕಾರ್ಯಕ್ರಮಗಳು ಜರುಗಿದವು. ಪ್ರಬಂಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ಣಕುಂಭ ಕಲಶ ಹೊತ್ತ ಸಂಘ-ಸAಸ್ಥೆಗಳ ಮಹಿಳೆಯರ ಸಮ್ಮುಖದಲ್ಲಿ ಸಂವಿಧಾನ ಜಾಗೃತಿ ರಥದ ಮೆರವಣಿಗೆ ನಡೆಸಲಾಯಿತು. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಸದಸ್ಯರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಥದೊಂದಿಗೆ ರಿವರ್ ರಾಫ್ಟಿಂಗ್ ಸಿಬ್ಬಂದಿಗಳ ಬೈಕ್ ಜಾಥಾ, ಆದಿವಾಸಿ ಸಂಸ್ಕೃತಿಕ ಬಿಂಬಿಸುವ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಈ ಸಂದರ್ಭ ತಾಲೂಕು ನೋಡಲ್ ಅಧಿಕಾರಿ ಬಿ.ಇ.ಓ. ಭಾಗ್ಯಮ್ಮ, ಜಿಲ್ಲಾ ನೋಡಲ್ ಅಧಿಕಾರಿ ಕೃಷ್ಣಪ್ರಸಾದ್, ಗ್ರಾ.ಪಂ. ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಲೋಕನಾಥ್, ಮಾವಾಜಿ ರಕ್ಷಿತ್, ಸಮೀರ, ಜಾಜಿ ತಮ್ಮಯ್ಯ, ಕುಸುಮ, ಪಿ.ಡಿ.ಓ. ರಾಜಶೇಖರ್, ಕಾರ್ಯದರ್ಶಿ ಶೇಷಗಿರಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ, ಗಿರಿಜನ ಮುಖಂಡ ಜೆ.ಟಿ. ಕಾಳಿಂಗ, ಸಂಜೀವಿನಿ ಒಕ್ಕೂಟದ ಪದಾಧಿಕಾರಿ ಸರಿತಾ ಮತ್ತಿತರರು ಪಾಲ್ಗೊಂಡಿದ್ದರು.