ಸೋಮವಾರಪೇಟೆ, ಫೆ. ೧೬: ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ಸೂಕ್ತ ನಿರ್ವಹಣೆಯಿಲ್ಲದ ವಿದ್ಯುತ್ ಟ್ರಾನ್ಸ್ಫಾರಂನ ತಂತಿ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೂವರೆ ಎಕರೆಯಷ್ಟು ಕಾಫಿ ತೋಟ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ಬಿಳಿಗೇರಿ ಗ್ರಾಮದ ಕೃಷಿಕ ಬಿ.ಬಿ.ಕರುಂಬಯ್ಯ ಎಂಬವರು ಕೃಷಿ ಮಾಡಿದ ೮ ವರ್ಷದ ಅರೇಬಿಕಾ ಕಾಫಿ ಗಿಡ, ಒಂದು ಸಾವಿರ ಕಾಳುಮೆಣಸು ಬಳ್ಳಿಗಳು, ೫೦೦ ರಷ್ಟು ಕಿತ್ತಳೆ ಮರಗಳು, ೧೫೦ ಬಾಳೆಗಿಡಗಳು ಸಂಪೂರ್ಣ ಸುಟ್ಟುಹೋಗಿದ್ದು, ೧೫ ಲಕ್ಷ ರೂ.ನಷ್ಟು ಹಾನಿಯಾಗಿದೆ. ಕೂಡಲೇ ಪರಿಹಾರ ನೀಡಬೇಕೆಂದು ತಹಶೀಲ್ದಾರ್ ಮತ್ತು ಸೆಸ್ಕ್ ಇಲಾಖೆಗೆ ಮನವಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಸೆಸ್ಕ್ನ ಇ.ಇ. ಅಮಿತ್, ಎಇಇ ಮಂಜುನಾಥ್, ರವಿ, ಜೆಇ ಕುಮಾರ್ ಅವರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರತಿವರ್ಷ ಟ್ರಾನ್ಸ್ಫಾರಂನಲ್ಲಿ ತಂತಿಗಳು ಸ್ಪರ್ಶಗೊಂಡು ಬೆಂಕಿ ಹೊತ್ತಿಕೊಂಡು ಕೃಷಿ ಫಸಲು ಹಾನಿಯಾಗುತ್ತಿದ್ದು, ಟ್ರಾನ್ಸ್ಫಾರಂ ಸರಿಪಡಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ. ಇಲಾಖೆಯ ನಿರ್ಲಕ್ಷö್ಯದಿಂದ ಈ ಬಾರಿ ದೊಡ್ಡಮಟ್ಟದ ಹಾನಿಯಾಗಿದೆ. ತಕ್ಷಣ ಪರಿಹಾರ ನೀಡುವುದರೊಂದಿಗೆ ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡಬೇಕೆಂದು ಕರುಂಬಯ್ಯ ಒತ್ತಾಯಿಸಿದ್ದಾರೆ.