ನಾಪೋಕ್ಲು, ಫೆ. ೧೭: ಸಂಪಾಜೆ ಗ್ರಾಮದ ಕೊಯನಾಡಿನ ಕುಂದಲಪಾಡಿಯಲ್ಲಿ ತೋಟಗಳಿಗೆ ನುಗ್ಗಿದ ಕಾಡಾನೆಗಳು ಬೆಳೆ ನಾಶಗೊಳಿಸಿ ನಷ್ಟ ಉಂಟುಮಾಡಿದೆ.

ಆನೆಗಳ ದಾಂಧಲೆಯಿAದ ತೆಂಗು, ಅಡಿಕೆ, ಬಾಳೆ ಗಿಡಗಳು ನಾಶವಾಗಿವೆ. ಜಯಪ್ರಕಾಶ್ ಹಾಗೂ ಪದ್ಮನಾಭ ಎಂಬವರ ತೋಟದ ತೆಂಗು, ಮರ, ಬಾಳೆ, ಅಡಿಕೆ ಗಿಡಗಳು ನಾಶವಾಗಿದೆ. ಹರೀಶ್ ಅವರ ತೋಟದಲ್ಲೂ ಕಾಡಾನೆಗಳ ಹಿಂಡು ಹಾನಿ ಮಾಡಿದೆ.

ಈ ಬಗ್ಗೆ ಸರಕಾರ ಹಾಗೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಹಾನಿಗೊಳಗಾದ ರೈತರ ಕುಟುಂಬಗಳಿಗೆ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.