ಮಡಿಕೇರಿ, ಫೆ. ೧೬: ಮಡಿಕೇರಿ-ಮಂಗಳೂರು ಹೆದ್ದಾರಿ ನಡುವಿನ ೨ನೇ ಮೊಣ್ಣಂಗೇರಿಯಲ್ಲಿ ಸರಕಾರಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತ ಪರಿಣಾಮ ಎರಡು ವಾಹನಗಳು ಜಖಂಗೊAಡು ಅದೃಷ್ಟವಶಾತ್ ಚಾಲಕರು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಡಿಕೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ (ಕೆ.ಎ. ೧೯ ಎಫ್ ೩೪೬೬) ಹಾಗೂ ಮಂಗಳೂರಿನಿAದ ಬೆಂಗಳೂರಿಗೆ ತೆರಳುತ್ತಿದ್ದ ಆಂದ್ರ ಮೂಲದ ಲಾರಿ (ಎ.ಪಿ. ೦೫ ಟಿಡಿ ೬೦೧೨) ನಡುವೆ ತಿರುವಿನಲ್ಲಿ ಅಪಘಾತವಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿ ಪಲ್ಟಿಯಾಗಿದ್ದು, ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ.