ಮಡಿಕೇರಿ ಫೆ. ೧೬: ಭಾರತೀಯ ಜನತಾ ಪಾರ್ಟಿಯ ಕೊಡಗು ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯ ದರ್ಶಿಗಳನ್ನಾಗಿ ವೀರಾಜಪೇಟೆಯ ಕಾವಾಡಿ ಗ್ರಾಮದ ಪ್ರಸಾದ್ ಚಂಗಪ್ಪ ಹಾಗೂ ಮಡಿಕೇರಿಯ ಇಬ್ಬನಿವಳವಾಡಿ ಗ್ರಾಮದ ವಿನೋದ್ ಪಿ.ಎಂ ಅವರನ್ನು ಆಯ್ಕೆ ಮಾಡಿರುವುದಾಗಿ ಮೋರ್ಚಾದ ನೂತನ ಜಿಲ್ಲಾಧ್ಯಕ್ಷ ಮಹೇಶ್ ತಿಮ್ಮಯ್ಯ ತಿಳಿಸಿದ್ದಾರೆ.