ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏಕಾಧಿಪತ್ಯವು ಸ್ವಾತಂತ್ರö್ಯ ಸಿಕ್ಕಿದ ನಂತರ ಆರಂಭವಾಯಿತು. ಅಂದು ಕಾಂಗ್ರೆಸ್ ಪಕ್ಷ ಬ್ರಿಟಿಷರ ತೆಕ್ಕೆಯಿಂದ ಆಡಳಿತ ವಹಿಸಿಕೊಳ್ಳುವಾಗ ಆಗ ಪ್ರಧಾನಿ ಅಭ್ಯರ್ಥಿಯಾಗಿ ನೆಹರು ಅವರು ಆಯ್ಕೆಯಾದರು. ಸರ್ದಾರ್ ವಲಭಭಾಯಿ ಪಟೇಲ್, ಲಾಲ್ ಬಹುದೂರ್ ಶಾಸ್ತಿç ಇಂತಹ ಅಭ್ಯರ್ಥಿ ಇದ್ದರು. ಅವರು ಗಾಂಧೀಜಿಯ ಆಪ್ತರಾಗಿದ್ದ ನೆಹರುರವರನ್ನು ಗಾಂಧೀಜಿಯವರ ಬಯಕೆಯಂತೆ ಆಯ್ಕೆ ಮಾಡಿದರು.

ಅಂದಿನಿAದ ಕಾಂಗ್ರೆಸ್ ಪಕ್ಷದಲ್ಲಿ ಏಕಾಧಿಪತಿ ಆಡಳಿತ ಜಾರಿಗೆ ಬಂತು. ಆದರೆ ಇಂದಿರಾ ಗಾಂಧಿ ಪ್ರಧಾನಿ ಆಗುವವರೆಗೂ ಕಾಂಗ್ರೆಸ್ ಪಕ್ಷದಲ್ಲಿ ಅಷ್ಟಾಗಿ ಏಕಾಧಿಪತ್ಯ ಇರಲಿಲ್ಲ. ಯಾವಾಗ ಇಂದಿರಾ ಸುಪ್ರದಿಗೆ ಪಕ್ಷ ಬಂತೋ. ಅಂದಿನಿAದ ಇಂದಿನವರೆಗೆ ಕಾಂಗ್ರೆಸ್ ಪಕ್ಷ ಅವರ ಕುಟುಂಬದ ಹಿಡಿತದಲ್ಲಿ ಇದೆ. ಇಂದಿರಾಗಾAಧಿ ನಂತರ ರಾಜೀವ್ ಗಾಂಧಿ ಅಲ್ಪ ಕಾಲ ಆಡಳಿತ ನಡೆಸಿದರು. ಅಲ್ಲಿಂದ ಕಾಂಗ್ರೆಸ್ ಪಕ್ಷವನ್ನು ಹಿಡಿತದಲ್ಲಿ ಇಟ್ಟುಕೊಂಡು ರಿಮೋಟ್ ಆಡಳಿತ ನಡೆಸಿದವರು ಸೋನಿಯಾ ಗಾಂಧಿ.

ಇನ್ನು ಭಾರತದ ವಿವಿಧ ರಾಜ್ಯಗಳಲ್ಲಿಯೂ ಏಕಾಧಿಪತ್ಯ ನಡೆಸಿದ ಆಡಳಿತಗಾರರಿಗಿಂತ ಆಡಳಿತಗಾರ್ತಿಯರೇ ಹೆಚ್ಚು. ಅವರಲ್ಲಿ ತಮಿಳುನಾಡಿನ ಜಯಲಲಿತ (ದಿವಂಗತರು) ದಶಕಗಳ ಕಾಲ ಪಾರುಪತ್ಯ ನಡೆಸಿದರು. ಹಾಗೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಉತ್ತರ ಪ್ರದೇಶದ ಮಾಯಾವತಿ. ಇವರುಗಳು ಆಯಾ ರಾಜ್ಯದಲ್ಲಿ ಪಾರುಪತ್ಯ ನಡೆಸಿದರು. ಮಮತಾ ಈಗಲೂ ನಡೆಸುತ್ತಿದ್ದಾರೆ. ಆಡಳಿತಗಾರರಲ್ಲಿ ಪ್ರಮುಖವಾಗಿ ದೀರ್ಘವಾದ ಆಡಳಿತ ನಡೆಸಿದ ತಮಿಳುನಾಡಿನ ಎಂ.ಜಿ ರಾಮಚಂದ್ರ ಮತ್ತು ಡಿ.ಎಂ. ಕರುಣಾನಿಧಿ. ಇವರು ಪಕ್ಷ ಮತ್ತು ಆಡಳಿತ ಎರಡರಲ್ಲೂ ಹಿಡಿತ ಇಟ್ಟುಕೊಂಡಿದ್ದರು. ಅಲ್ಲದೆ, ಇನ್ನು ಅನೇಕ ನಾಯಕರು ದೀರ್ಘ ಕಾಲ ಹಲವು ರಾಜ್ಯಗಳಲ್ಲಿ ಆಡಳಿತ ನಡೆಸಿದ್ದಾರೆ. ಅವರು ಏಕಾಧಿಪತ್ಯ ನಡೆಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರುಗಳ ಮೇಲೆ ಅವರ ಪಕ್ಷದ ಹಿಡಿತವಿತ್ತು.

ಈ ಮಂದಿಯ ಆಡಳಿತ ಸಾಧಕ ಬಾಧಕಗಳನ್ನು ನಾವು ಗಮನಿಸಬೇಕಾದ ಅಂಶಗಳು ತುಂಬಾ ಇದೆ. ಇದರಿಂದ ಸಮಾಜಕ್ಕೆ ಒಳ್ಳೆಯದ್ದೂ ಆಗಿದೆ, ಕೆಟ್ಟದ್ದೂ ಆಗಿದೆ. ಅಭಿವೃದ್ಧಿ ದೃಷ್ಟಿಯಿಂದ ಏಕಾಧಿಪತ್ಯ ಆಡಳಿತವು ಒಳ್ಳೆಯದ್ದು ಎನಿಸಿಕೊಂಡಿದೆ. ಹಾಗೆ ಮಾರಕವೂ ಆಗಿದೆ. ಆ ಪೈಕಿ ಇಂದಿರಾ ಗಾಂಧಿ ತೆಗೆದುಕೊಂಡ ಅನೇಕ ನಿರ್ಧಾರಗಳು ಏಕಪಕ್ಷೀಯವೇ ಆಗಿತ್ತು. ಬಸ್‌ಗಳ, ಬ್ಯಾಂಕ್‌ಗಳ ರಾಷ್ಟಿçÃಕರಣ ಉದಾಹರಣೆಯಾಗಿದೆ. ಅಂದು ಭಾರತವು ಆರ್ಥಿಕವಾಗಿ ಬಹಳ ಹಿಂದುಳಿದ ದೇಶವಾಗಿತ್ತು. ಅಂದು ಅಮೇರಿಕಾ ಸಂಸ್ಥಾನ ಮತ್ತೆ ರಷ್ಯ ಸಂಸ್ಥೆ ಒಕ್ಕೂಟಗಳು ಬಲಿಷ್ಠವಾಗಿತ್ತು. ಅಂದು ಎರಡು ದೇಶದ ನಡುವೆ ಶೀತಲ ಸಮರ ನಡೆಯುವ ಕಾಲ. ಸ್ವಲ್ಪ ಎಚ್ಚರ ತಪ್ಪಿದರೂ ಮೂರನೇ ಮಹಾಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿತ್ತು. ಅಮೇರಿಕಾ ಸಂಸ್ಥೆಯು ನಮ್ಮ ನೆರೆಯ ದೇಶ ಪಾಕಿಸ್ತಾನಕ್ಕೆ ಪೂರ್ತಿ ಬೆಂಬಲ ನೀಡಿತ್ತು. ಅಂತ ಪರಿಸ್ಥಿತಿಯನ್ನು ನಿಭಾಯಿಸುವುದು ತುಂಬಾ ಕಷ್ಟವಾಗಿತ್ತು. ವಿದೇಶಾಂಗ ನೀತಿಯ ವಿಷಯ ಬಂದಾಗ ವಾಜಪೇಯಿ ಅವರ ಸಲಹೆಯನ್ನು ಎಲ್ಲರೂ ತೆಗೆದುಕೊಳ್ಳುತ್ತಿದ್ದರು. ಅನೇಕ ಬಾರಿ ವಿಶ್ವ ಸಂಸ್ಥೆಯಲ್ಲಿ ಭಾರತದ ಪರವಾಗಿ ವಾದ ಮಂಡಿಸಿ ವಿಶ್ವವನ್ನೇ ಬೆರಗುಗೊಳಿಸಿದ ಕೀರ್ತಿ ಇವರದ್ದು. ಅಂದು ಆಡಳಿತ ಪಕ್ಷವೆಂದರೆ ಪಕ್ಕಾ ವಿರೋಧಿಗಳು. ಅಂದು ಚುನಾವಣೆಗಳು ಅಜೆಂಡ ಮೇಲೆ ನಡೆಯುತ್ತಿದ್ದ ಕಾಲ. ಈಗ ಹಣ ಅಧಿಕಾರದ ಮೇಲೆ ನಡೆಯುತ್ತದೆ. ಅಂದು ಇಂದಿರಾ ಗಾಂಧಿ ಏಕಾಧಿಪತ್ಯ ಆಡಳಿತ ನಡೆಸಿದಾದ್ರೂ ಕಾಂಗ್ರೆಸ್ ವರ್ಕಿಂಗ್ ಕಮಿಟ್ ಇತ್ತು. ಅದರಲ್ಲಿ ಬಹಳಷ್ಟು ನಿರ್ಧಾರಗಳು ಅಲ್ಲಿಯೇ ನಿರ್ಧಾರ ಆಗುತ್ತಿತು.್ತ ಇಂದಿರಾ ಅವರ ಎರಡು ನಿರ್ಧಾರ ಅವರ ಭವಿಷ್ಯಕ್ಕೆ ಮುಳುವಾಯಿತು. ಒಂದು ತುರ್ತು ಪರಿಸ್ಥಿತಿ ಮತ್ತು ಘೋಷಣೆ. ಇನ್ನೊಂದು ಬ್ಲೂಸ್ಟಾರ್ ಆಪರೇಷನ್. ಒಂದು ಅಧಿಕಾರ ಕಳೆದುಕೊಂಡರೆ ಇನ್ನೊಂದು ಪ್ರಾಣವನ್ನೇ ತೆಗೆಯಿತು. ಅವರ ನಂತರ ಏಕಾಧಿಪತ್ಯ ಆಡಳಿತ ನಡೆಸುತ್ತಿರುವವರು ಅಂದರೆ ನರೇಂದ್ರ ಮೋದೀಜಿ. ಅವರ ಆಡಳಿತವು ಕೂಡ ಒಂದು ರೀತಿಯ ಏಕಪಕ್ಷೀಯವಾದದ್ದೇ. ನೋಟ್ ಬ್ಯಾನ್ ಇರಲಿ, ಬ್ಯಾಂಕ್‌ಗಳ ವಿಲೀನ, ಉಗ್ರವಾದದ ವಿರೋಧ ಹೋರಾಟ, ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಆಗಲಿ, ರಾಷ್ಟಿçÃಯ ಮಟ್ಟದಲ್ಲಿ ಕೈಗೊಳ್ಳಬೇಕಾದ ವಿಷಯಗಳ ಬಗ್ಗೆ ಅಥವಾ ಪಕ್ಷದಲ್ಲಿನ ಅಂತರಿಕ ವಿಷಯವೇ ಆಗಲಿ, ಯಾವುದೇ ತೀರ್ಮಾನ ಏಕಪಕ್ಷೀಯವಾಗಿದೆ. ಈಗ ಒಂದು ರೀತಿಯಲ್ಲಿ ಮೋದಿಯದ್ದೇ ಹವಾ.

ಇಲ್ಲಿ ಏಕಾಧಿಪತ್ಯ ಆಡಳಿತ ಒಂದು ರೀತಿಯಲ್ಲಿ ಒಳ್ಳೆಯದು. ಅದು ನಾಯಕರ ಮನೋಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ. ಅನೇಕ ವಿಷಯಗಳ ನಿರ್ಣಯವನ್ನು ಏಕಪಕ್ಷೀಯವಾಗಿ ಕೈಗೊಂಡರೆ ದೇಶದ ಭದ್ರತೆ ವಿಷಯದಲ್ಲಿ ಒಳ್ಳೆಯದು. ಇನ್ನು ಪಕ್ಷದ ವಿಚಾರದಲ್ಲಿ ಎಲ್ಲಿಯವರೆಗೆ ಒಬ್ಬ ನಾಯಕನಿಗೆ ಜನ ಬೆಂಬಲವಿರುತ್ತದೆಯೋ ಅಲ್ಲಿಯವರಿಗೆ ಅವರು ಆಡಳಿತ ನಡೆಸುತ್ತಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇರುವವರೆಗೂ ಪಕ್ಷ ಅವರ ಹಿಡಿತದಲ್ಲಿ ಇತ್ತು. ಇಂದು ರಾಷ್ಟಿçÃಯ ಪಕ್ಷದಿಂದ ಪ್ರಾದೇಶಿಕ ಪಕ್ಷವಾಗಿದೆ. ಕಾಂಗ್ರೆಸ್‌ನಲ್ಲಿ ಇಂದು ಆ ಪಕ್ಷಕ್ಕೆ ಒಬ್ಬನೇ ಒಬ್ಬ ‘ಮಾಸ್’ ಲೀಡರ್ ಇಲ್ಲ. ಇನ್ನು ಭಾರತಿಯ ಜನತಾಪಕ್ಷ ಕೂಡ ಅದೇ ದಾರಿಯಲ್ಲಿ ಸಾಗುತ್ತಿದೆ. ಅಂದರೆ ಉತ್ಪೆçÃಕ್ಷೆಯಾಗದು. ವಾಜಪೇಯಿ, ಅಡ್ವಾಣಿ ಅಂತ ನಾಯಕರಿದ್ದಾಗ ಅನೇಕ ಎರಡನೇ ಹಂತದ ನಾಯಕರಿದ್ದರು. ಉದಾಹರಣೆಗೆ ಸುಷ್ಮಾ ಸ್ವರಾಜ್, ಪ್ರಮೋದ್ ಮಹಾಜನ್, ಉಮಾ ಭಾರತಿ, ಯಶ್ವಂತ್ ಸಿನ್ಹ ಹೀಗೆ ಹೆಸರಿಸಿದರೆ ದೊಡ್ಡ ಪಟ್ಟಿಯೇ ಸಿಗುತ್ತದೆ. ಯಾವಾಗ ಮೋದೀಜಿ ಹವಾ ಆರಂಭವಾಯಿತೊ ಎರಡನೇ ಹಂತದ ನಾಯಕರ ಬೆಳವಣಿಗೆ ಕುಂಠಿತಗೊAಡಿತು ಎನ್ನಬಹುದು.

ಕರ್ನಾಟಕದಲ್ಲಿ ದೇವರಾಜ್ ಅರಸ್ ಅನೇಕ ಎರಡನೇ ಹಂತದ ನಾಯಕರನ್ನು ಬೆಳೆಸಿದ್ದರು. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷಗಳು ಅನೇಕ ವರ್ಷಗಳ ಕಾಲ ಏಕಾಧಿಪತ್ಯದ ಆಡಳಿತ ನಡೆಸಿದರು. ಅವರ ನಂತರ ಅವರ ಮಕ್ಕಳನ್ನೇ ನಾಯಕರನ್ನಾಗಿ ಬಿಂಬಿಸುವ ಪ್ರಯತ್ನ ಮಾಡಿ ಸೋತವರೆ ಹೆಚ್ಚು. ತಾವೂ ಉಳಿಯಲಿಲ್ಲ-ಪಕ್ಷವನ್ನು ಉಳಿಸಲಿಲ್ಲ. ನಾಯಕತ್ವ ಚಳುವಳಿ, ಹೋರಾಟಗಳಿಂದ ರೂಪುಗೊಳ್ಳಬೇಕೇ ಹೊರತು ವಂಶ ಪರಂಪರೆಯಿAದ ಬರಬಾರದು. ಪ್ರಜಾಪ್ರಭುತ್ವದ ಆಡಳಿತದಲ್ಲಿ ಏಕಾಧಿಪತ್ಯ ಆಡಳಿತ ಒಂದು ಕೋನದಿಂದ ನೋಡಿದರೆ ಒಳ್ಳೆಯದು. ಏಕೆಂದರೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಏಕ ನಿರ್ಣಯ ಒಳ್ಳೆಯದು. ಆದರೆ ಅದು ಪ್ರಜಾ ವಿರೋಧಿ. ಆದರೆ ಕಷ್ಟ. ನನ್ನ ವಿಶ್ಲೇಷಣೆ ಪ್ರಕಾರ ಏಕಾಧಿಪತ್ಯ ಆಡಳಿತ ನಡೆಸಿದರೂ ಅಥವಾ ಬಹು ನಾಯಕತ್ವ ಆಡಳಿತ ನಡೆಸಿದರೂ ಕೊನೆಗೆ ಉಳಿಯುವುದು ಶೂನ್ಯ. ಏಕೆಂದರೆ ಪ್ರಜಾಪ್ರಭುತ್ವದಡಿಯಲ್ಲಿ ಬಹುನಾಯಕತ್ವದಡಿಯಲ್ಲಿ ಕಾರ್ಯನಿರ್ವಹಿಸಿದ ಪಕ್ಷಗಳು ಹಾಗೆ ಏಕಾಧಿಪತ್ಯ ಆಡಳಿತ ನಡೆಸಿದ ಪಕ್ಷಗಳು ಹೋಳಾಗಿದ್ದೇ ಹೆಚ್ಚು!

- ಬಾಳೆಯಡ ಕಿಶನ್ ಪೂವಯ್ಯ, ವಕೀಲರು-ನೋಟರಿ. ಮೊ. ೯೪೪೮೮೯೯೫೫೫೪.