ಮಡಿಕೇರಿ, ಫೆ. ೧೬: ಜೋಡುಪಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಐ.ಎಸ್.ಎಫ್. ಮತ್ತು ಐ.ಇ.ಇ.ಇ. ಸಂಸ್ಥೆಯ ಸಹಯೋಗದಿಂದ ಸ್ಮಾರ್ಟ್ ಕ್ಲಾಸ್‌ನ್ನು ಕೊಡುಗೆಯಾಗಿ ನೀಡಲಾಯಿತು.

ಇದರ ಉದ್ಘಾಟನೆಯನ್ನು ಇತ್ತೀಚೆಗೆ ಸಂಸ್ಥೆಯ ರಾಜ್ಯ ಸಂಯೋಜಕ ಹೆಚ್.ವಿ. ಸ್ವರಾಜ್ ನೇತೃತ್ವದಲ್ಲಿ ನೆರವೇರಿಸಲಾಯಿತು. ಸಮಾರಂಭದ ಉದ್ಘಾಟನೆಯನ್ನು ತಾಲೂಕು ಶಿಕ್ಷಣಾಧಿಕಾರಿ ದೊಡ್ಡೇಗೌಡ ಅವರು ನೆರವೇರಿಸಿದರು. ಬಿ.ಆರ್.ಸಿ. ಕೇಂದ್ರದ ಬಿ.ಆರ್.ಪಿ.ಗಳಾದ ಗುರುರಾಜ್ ಮತ್ತು ಮಡಿಕೇರಿ ಕ್ಲಸ್ಟರ್‌ನ ಸಿ.ಆರ್.ಪಿ. ಶೃತಿಶ್ರೀ ಹಾಜರಿದ್ದರು. ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕಿ ಎಂ.ಎನ್. ಕವಿತ ನಿರೂಪಿಸಿದರು. ಮುಖ್ಯ ಶಿಕ್ಷಕಿ ಪಿ.ಬಿ. ದಮಯಂತಿ ಸ್ವಾಗತಿಸಿ, ಸ್ಮಾರ್ಟ್ ಕ್ಲಾಸ್ ಉಪಯೋಗ ಮತ್ತು ಬಳಕೆ ಬಗ್ಗೆ ತಿಳಿಸಿದರು. ಶಿಕ್ಷಕಿ ಕೆ.ಪಿ. ಅಮರಾವತಿ ವಂದಿಸಿದರು.