ಸುAಟಿಕೊಪ್ಪ, ಫೆ. ೧೮: ಸುಂಟಿಕೊಪ್ಪ ಜೆ.ಸಿ.ಐ. ಸಂಸ್ಥೆಯ ನೂತನ ಅಧ್ಯಕ್ಷರಿಗೆ ಹಾಗೂ ಸದಸ್ಯರುಗಳಿಗೆ (ಪ್ರಗತಿ) ವಿಚಾರ ಸಂಕಿರÀಣ ತರಬೇತಿ ಕಾರ್ಯಕ್ರಮ ನಡೆಯಿತು. ಕುಶಾಲನಗರ ಸಿರಿ ಅಂಭಾರಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಕ್ರಮವನ್ನು ಜೆ.ಸಿ.ಐ. ವಲಯ ೧೪ರ ಅಧ್ಯಕ್ಷೆ ಆಶಾ ಜೈನ್ ಉದ್ಘಾಟಿಸಿದರು. ನಂತರ ತರಬೇತುದಾರರಾದ ಜೆ.ಸಿ.ಐ. ಪ್ರಮೋದ್ ಕುಮಾರ್, ಕುನಾಲ್ ಮಾನೀಕ್ ಚಂದ್, ನವೀನ್ ಜೆ.ಸಿ.ಐ. ಸಂಸ್ಥೆಯ ದ್ಯೇಯೋದ್ಧೇಶ, ಸಮಾಜ ಸೇವೆ, ನಾಯಕತ್ವ ನಡವಳಿಕೆ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಜೇಸಿ ಅಧ್ಯಕ್ಷ ಸಂಪತ್ ಕುಮಾರ್, ಪ್ರಾಜೆಕ್ಟ್ ನಿರ್ದೇಶಕ ಜೇಸಿ ಸತೀಶ್ ಹಾಗೂ ಇತರರು ಇದ್ದರು.