ಮಡಿಕೇರಿ, ಫೆ. ೧೮: ಪಾದಚಾರಿಯನ್ನು ಡಿಕ್ಕಿ ಪಡಿಸಿ ಕಾರು ನಿಲ್ಲಿಸದೆ ತೆರಳಿದ್ದ ಚಾಲಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರಸಂತೆ ಸಮೀಪದ ಹುಲಸೆ ಗ್ರಾಮದ ಶಿರಂಗಾಲ ನಿವಾಸಿ ಎಂ.ಎA. ರಜಾಕ್ (೩೫) ಬಂಧಿತ ಆರೋಪಿ. ತಾ. ೬ ರಂದು ಬೆಳಿಗ್ಗೆ ೬.೩೦ ಗಂಟೆ ಸುಮಾರಿಗೆ ಹೆಬ್ಬಾಲೆ ಗ್ರಾಮದಲ್ಲಿ ಮುಲ್ಕಿ ಮೂಲದ ಫೆಲಿಕ್ಸ್ ಡಿಸೋಜ ಎಂಬವರ ಶವ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸಾಕ್ಷಾö್ಯಧಾರ ಕಲೆಹಾಕಿ ಅಪಘಾತದಿಂದ ಘಟನೆ ಸಂಭವಿಸಿದೆ ಎಂದು ಪತ್ತೆಹಚ್ಚಿದ್ದರು. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಈ ಸಂಬAಧ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಪಾದಚಾರಿಗೆ ಅಪಘಾತಗೊಳಿಸಿ ವಾಹನ ನಿಲ್ಲಿಸದೆ (ಹಿಟ್ ಆ್ಯಂಡ್ ರನ್) ತೆರಳಿದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅಪಘಾತಗೊಳಿಸಿದ ಕಿಯಾ ಸೆಲ್ಟೋಸ್ ಕಾರನ್ನು (ಕೆಎ-೫೧-ಎಂ.ಪಿ.-೮೧೭೩) ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೋಮವಾರಪೇಟೆ ಡಿವೈಎಸ್‌ಪಿ ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ. ಪ್ರಕಾಶ್, ಸಂಚಾರಿ ಠಾಣೆ ಉಪನಿರೀಕ್ಷಕಿ ಕುಸುಮ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.