ಸೋಮವಾರಪೇಟೆ, ಫೆ. ೧೮: ಅಯೋಧ್ಯೆಗೆ ೧೯೯೦ ರಲ್ಲಿ ಕರ ಸೇವಕರಾಗಿ ತೆರಳಿದ್ದ ಸೋಮವಾರಪೇಟೆ ಭಾಗದ ಕರಸೇವಕರು ಶ್ರೀ ರಾಮನ ದರ್ಶನಕ್ಕೆ ತೆರಳಿದ ಹಿನ್ನೆಲೆ, ಹಿಂದೂ ಸಂಘಟನೆಗಳ ವತಿಯಿಂದ ಬೀಳ್ಕೊಡಲಾಯಿತು.

ಕೂತಿ ಗ್ರಾಮದ ಪರಮೇಶ್, ಕಿರಗಂದೂರು ಪುಟ್ಟರಾಜ್, ಮಸಗೋಡು ಸುರೇಶ್, ಐಗೂರು ಪ್ರಭು, ಕಲ್ಕಂದೂರು ಅಪ್ಪಯ್ಯ, ಸಿ.ಕೆ. ಮೋಹನ್ ಚೌಡ್ಲು, ಗಣೇಶ ಹೊಸಬೀಡು, ತಾಕೇರಿ ಪೊನ್ನಪ್ಪ ಅವರನ್ನು ಸ್ಥಳೀಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬೀಳ್ಕೊಡಲಾಯಿತು.