ಮಡಿಕೇರಿ, ಫೆ. ೧೯: ಪ್ರತಿಷ್ಠಿತ ಆಸ್ಟೆçÃಲಿಯನ್ ಓಪನ್ ಗ್ರಾö್ಯಂಡ್‌ಸ್ಲಾಮ್ ಟೆನ್ನಿಸ್ ಪ್ರಶಸ್ತಿ ಗಳಿಸಿದ ವಿಶ್ವ ನಂ.೧ ಆಟಗಾರ ಹಾಗೂ ಪದ್ಮಶ್ರೀ ಪುರಸ್ಕೃತ ರೋಹನ್ ಬೋಪಣ್ಣ ಅವರನ್ನು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಗೌರವಿಸಿದರು.

ಬೆಂಗಳೂರಿನಲ್ಲಿ ಕರ್ನಾಟಕ ಸ್ಟೇಟ್ ಲಾಂಗ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ನಡೆದ ಬೆಂಗಳೂರು ಓಪನ್ ಕ್ರೀಡಾಕೂಟದಲ್ಲಿ ಶಾಸಕ ಪೊನ್ನಣ್ಣ ಅವರು ಅತಿಥಿಯಾಗಿದ್ದರು. ಈ ಸಂದರ್ಭ ರೋಹನ್ ಬೋಪಣ್ಣ ಅವರು ವಿಶೇಷ ಆಹ್ವಾನಿತ ಅತಿಥಿಯಾಗಿದ್ದು, ಈ ಸಂದರ್ಭದಲ್ಲಿ ಸಾಧಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.